ಭ್ರಷ್ಟಾಚಾರ ನಿರ್ಮೂಲನೆ ಕಷ್ಟ ಎಂಬ ಅಭಿಪ್ರಾಯವನ್ನು ದೇಶದ ಮುಕ್ಕಾಲು ಭಾಗದಷ್ಟು ಜನ ವ್ಯಕ್ತಪಡಿಸಿದ್ದಾರೆ ಎಂಬುದು ‘ಲೋಕಲ್ ಸರ್ಕಲ್’ ಸಂಸ್ಥೆಯ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ವರದಿಯಾಗಿದೆ. ಇದರಲ್ಲಿ ಆಶ್ಚರ್ಯಪಡುವಂತಹದ್ದು ಏನೂ ಇಲ್ಲ. ನಮ್ಮ ಸಾರ್ವಜನಿಕ ಸಂಸ್ಥೆಗಳು ಕಾರ್ಯನಿರ್ವಹಿಸುವ ವೈಖರಿಯನ್ನು ನೋಡಿರುವ, ಸ್ವತಃ ಅನುಭವಿಸಿರುವ ದೇಶದ ಶ್ರೀಸಾಮಾನ್ಯ ಇದಕ್ಕಿಂತ ಬೇರೆ ಅಭಿಪ್ರಾಯ ಹೊಂದಿರಲು ಸಾಧ್ಯವಿಲ್ಲ.
ಆಗರ್ಭ ಸಿರಿವಂತರೂ ಕೋವಿಡ್ ರೋಗದ ಮುಂದೆ ಅಸಹಾಯಕರಾಗಿ ಕೈಚೆಲ್ಲಿ ಕುಳಿತಿದ್ದಾರೆ. ನಿಸರ್ಗದ ಮುಂದೆ ಧನಕನಕ ನಗಣ್ಯ ಎಂಬುದು ಗೋಚರಿಸುತ್ತಿದೆ. ಈಗಲೂ ಹಣದ ಮೇಲಿನ ವಿಪರೀತ ಮೋಹ ಬಿಡದಿದ್ದರೆ ಇನ್ಯಾವಾಗ ಪಾಠ ಕಲಿಯುವುದು? ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕವಾಗಿ ಬದುಕುವುದು ಮತ್ತು ಇತರರಿಗೆ ಸಹೃದಯದಿಂದ ಸಹಾಯ ಮಾಡುವುದು ಮಾತ್ರ ನೆಮ್ಮದಿ ನೀಡಬಲ್ಲದು.
-ಡಾ. ಕೆ.ಎಸ್.ಗಂಗಾಧರ,ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.