ADVERTISEMENT

ವಾಚಕರ ವಾಣಿ: ಪ್ರವಾಹ ನಿಯಂತ್ರಣಕ್ಕೆ ಬೇಕು ಶಾಶ್ವತ ಕ್ರಮ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 20:15 IST
Last Updated 18 ಆಗಸ್ಟ್ 2020, 20:15 IST

ಮಳೆಗಾಲದಲ್ಲಿ ನಿರಂತರವಾಗಿ ಸುರಿಯುವ ಭಾರಿ ಮಳೆಯಂತಹ ನೈಸರ್ಗಿಕ ಸ್ಥಿತಿಗೆ ಮಾನವನಿರ್ಮಿತ ಕೃತ್ಯಗಳೂ ಸೇರಿ ಪ್ರವಾಹಕ್ಕೆ ಕಾರಣವಾಗುತ್ತವೆ. ಬೆಳೆಹಾನಿ, ಸಾವು–ನೋವಿಗೆ ದಾರಿ ತೆಗೆಯುತ್ತವೆ. ಪ್ರವಾಹ ಪರಿಸ್ಥಿತಿಗೆ ನದಿ ತೀರಗಳ ಅತಿಕ್ರಮಣ, ಯೋಜಿತವಲ್ಲದ ರೀತಿಯಲ್ಲಿ ನಗರಗಳ ಬೆಳವಣಿಗೆ, ಬೆಟ್ಟ ಕತ್ತರಿಸುವುದು ಹಾಗೂಅರಣ್ಯನಾಶದಂತಹ ಮಾನವಜನ್ಯ ಕಾರಣಗಳ ಕೊಡುಗೆ ಕಡಿಮೆಯೇನಲ್ಲ.

ಪ್ರವಾಹವನ್ನು ಅತ್ಯಂತ ಅಪಾಯಕಾರಿ ನೈಸರ್ಗಿಕ ವಿಪತ್ತುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಪ್ರತಿವರ್ಷದ ಕಂಟಕವಾಗಿ ಪರಿಣಮಿಸಿದೆ. ಇದನ್ನು ನಿಭಾಯಿಸಲು ಮತ್ತು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೂರಗಾಮಿ ಮತ್ತು ಶಾಶ್ವತ ಕ್ರಮಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕು.ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿ ಜಾರಿಗೆ ತರಬೇಕು.
-ಪ್ರವೀಣ ನಾಗಪ್ಪ ಯಲವಿಗಿ,ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT