ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿಯ ಶಿಫಾರಸು ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾಗುತ್ತಿದೆ. ಅರಣ್ಯದ ಸೆರಗಿನಂಚಿನಲ್ಲಿ ತಲೆತಲಾಂತರದಿಂದ ವಾಸಿಸುತ್ತಿರುವ ಜನರ ಬದುಕಿನ ಪ್ರಶ್ನೆಗೆ ಸಂಬಂಧಿಸಿದಂತೆ, ವರದಿ ಸಿದ್ಧಪಡಿಸಿದವರಲ್ಲಾಗಲೀ ಅದನ್ನು ಅನುಷ್ಠಾನ ಮಾಡಹೊರಟ ಕೇಂದ್ರ ಸರ್ಕಾರದ ಬಳಿಯಾಗಲೀ ಉತ್ತರ ಇಲ್ಲದಿರುವುದು ಬೇಸರದ ಸಂಗತಿ.
ಕಾಡು ಉಳಿಯಬೇಕು. ಇದು ಅನಿವಾರ್ಯ ಮತ್ತು ಅಗತ್ಯ ಕೂಡ. ಆದರೆ, ಕಾಡಿನಂಚಿನಲ್ಲಿ ವಾಸಿಸುತ್ತಿರುವವರಿಗೂ ಬದುಕುವ ಹಕ್ಕಿದೆ, ಅವರೂ ಮೂಲ ಸೌಕರ್ಯ ಪಡೆಯಲು ಅರ್ಹರು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿದೆ. ಅರಣ್ಯದ ಪ್ರಮಾಣ ಒಂದಿಷ್ಟಾದರೂ ಉಳಿದಿದೆ ಎನ್ನುವುದಾದರೆ ಅದು ಇಂತಹವರಿಂದಲೇ ಎನ್ನುವ ಸತ್ಯವನ್ನು ಮರೆಯಬಾರದು.
-ಬಾಬು ಶಿರಮೋಜಿ, ಬೆಳಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.