
ಪ್ರಜಾವಾಣಿ ವಾರ್ತೆಕೋವಿಡ್ ಕಾರಣದಿಂದ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತವಾಗಿತ್ತು. ಸಂಕಷ್ಟ ಕಾಲದಲ್ಲಿ ಸರ್ಕಾರವು ಮಕ್ಕಳಿಗೆ ಸಲ್ಲಬೇಕಾದ ಆಹಾರ ಪದಾರ್ಥವನ್ನು ಅವರ ಮನೆಗೆ ತಲುಪಿಸುತ್ತಿರುವುದು ಶ್ಲಾಘನೀಯ.
ಆದರೆ ಇನ್ನೂ ಅದೇ ಮಾರ್ಗವನ್ನು ಅನುಸರಿಸಿದರೆ ಅಕ್ಷರ ದಾಸೋಹ ಕಾರ್ಯಕ್ರಮದ ನೈಜ ಕಳಕಳಿಯನ್ನು ಮರೆತಂತಾಗುತ್ತದೆ. ಶಾಲೆಗಳಲ್ಲಿ ಬಿಸಿಯೂಟ ಯೋಜನೆಯನ್ನು ಪುನರಾರಂಭ ಮಾಡುವುದಕ್ಕೆ ತಡಮಾಡದಿರುವುದು ಲೇಸು. ಬಿಸಿಯೂಟ ಪುನಃ ಆರಂಭಿಸಿದರೆ ಲಕ್ಷಾಂತರ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ.
-ಸರೋಜಿ ನಾಯಕ್,ಹೊಸನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.