ADVERTISEMENT

ರಾಜೀನಾಮೆ ನೀಡಿ, ಪ್ರಜಾತಂತ್ರ ಉಳಿಸಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 2:04 IST
Last Updated 10 ಜುಲೈ 2019, 2:04 IST
   

ಎಚ್‌.ಡಿ.ಕುಮಾರಸ್ವಾಮಿ ಹಿಂದಿನ ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ, ಸರ್ಕಾರ ಉಳಿಸಿಕೊಳ್ಳುವಲ್ಲಿಯೇ ತಮ್ಮ ಜಾಣ್ಮೆ, ಸಮಯ, ಶ್ರಮ ವ್ಯಯಿಸುತ್ತಿದ್ದಾರೆ.

ವಿಶ್ವಾಸಮತ ಯಾಚಿಸುವ ಕಸರತ್ತು ನಡೆಸುವುದಕ್ಕಿಂತ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳಿತೇನೋ ಎಂಬಂತಿದೆ ಈಗಿನ ಸ್ಥಿತಿ.ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯಪಾಲರಿಗೆ ಇದೆ. ಜನರ ಮೇಲೆ ಅವಧಿಗೆ ಮುನ್ನ ಅನಗತ್ಯ ಚುನಾವಣೆ ಹೊರೆ ಹೇರುವುದನ್ನು ತಪ್ಪಿಸಿ ಪ್ರಜಾತಂತ್ರ ಉಳಿಸಬೇಕಾಗಿದೆ.
-ಆರ್.ವೆಂಕಟರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT