ADVERTISEMENT

ಬದುಕಿದ್ದಾಗ ಮನ ಮಿಡಿದಿದ್ದರೆ...

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 3 ಮಾರ್ಚ್ 2021, 19:30 IST
Last Updated 3 ಮಾರ್ಚ್ 2021, 19:30 IST

ಶ್ರೀರಂಗಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಯಾವುದೇ ಪಗಾರ ಸಿಗದಿದ್ದರೂ ಹಲವು ವರ್ಷಗಳಿಂದ ಬೀದಿ ಗುಡಿಸುವ ಕೆಲಸವನ್ನು ಮಾಡುತ್ತಿದ್ದ ರಂಗಯ್ಯ ಎಂಬ ಪೌರಕಾರ್ಮಿಕ ಮೃತಪಟ್ಟಿದ್ದು, ಅವರಿಗೆ ಊರವರು ಸಕಲ ಮರ್ಯಾದೆಯೊಂದಿಗೆ ಅಂತಿಮ ವಿದಾಯ ಹೇಳಿದ್ದಾಗಿ ವರದಿಯಾಗಿದೆ (ಪ್ರ.ವಾ., ಮಾರ್ಚ್‌ 3). ಈ ಕಾರ್ಯಕ್ಕೆ ಆ ಊರಿನವರು ಅಭಿನಂದನಾರ್ಹರು. ಆದರೆ ರಂಗಯ್ಯ ಪಗಾರ ಇಲ್ಲದೆ ನಿಷ್ಠೆಯಿಂದ ದುಡಿಯುತ್ತಿದ್ದ ಸಂದರ್ಭದಲ್ಲಿ, ಅಂದರೆ ಬದುಕಿದ್ದಾಗ ಆತನಿಗೆ ಏನಾದರೂ ಆರ್ಥಿಕಾನುಕೂಲ ಕಲ್ಪಿಸಿದ್ದರೆ, ಊರವರು ಅವರ ಮೇಲೆ ಇಟ್ಟಿದ್ದ ಪ್ರೀತಿ ಸಾರ್ಥಕವಾಗುತ್ತಿತ್ತು.

- ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT