ADVERTISEMENT

ಭತ್ಯೆ ಕೊಡುವುದೆಂದು?

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2018, 19:30 IST
Last Updated 12 ಆಗಸ್ಟ್ 2018, 19:30 IST

ಕರ್ನಾಟಕ ವಿಧಾನಸಭೆಗೆ 2018ರ ಮೇ ತಿಂಗಳಿನಲ್ಲಿ ಚುನಾವಣೆ ನಡೆದಿತ್ತು. ಇದಾದ ಬಳಿಕ ರಾಜಕೀಯ ಪಲ್ಲಟಗಳು ನಡೆದು, ನೂತನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು ಪ್ರಮಾಣವಚನ ಸ್ವೀಕರಿಸಿಯೂ ಆಗಿದೆ. ಆದರೆ ಚುನಾವಣಾ ಕರ್ತವ್ಯ ನಡೆಸಿದ್ದ ಸಿಬ್ಬಂದಿಗೆ ಇನ್ನೂ ಭತ್ಯೆ ಬಂದಿಲ್ಲ.

ಒಂದು ಚುನಾವಣೆಯು ಯಾವುದೇ ಅಡೆತಡೆಗಳಿಲ್ಲದೆ ನಡೆಯಬೇಕೆಂದರೆ ಸಾವಿರಾರು ಮಂದಿ ಎರಡು ಮೂರು ತಿಂಗಳುಗಳ ಕಾಲ ರಾತ್ರಿ ಹಗಲೆನ್ನದೆ ದುಡಿಯಬೇಕಾಗುತ್ತದೆ. ಹೀಗೆ ಕೆಲಸ ಮಾಡಿದವರಿಗೆ ಚುನಾವಣೆ ಮುಗಿದು ಮೂರು ತಿಂಗಳಾದರೂ ಭತ್ಯೆ ನೀಡದಿರುವುದು ಸರ್ಕಾರದಿಂದಾದ ಲೋಪ. ಸಂಬಂಧಪಟ್ಟವರು ಕೂಡಲೇ ಭತ್ಯೆ ಪಾವತಿಗೆ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT