ADVERTISEMENT

ಯಾವ ಬಗೆಯ ಮಂಗಳಾರತಿ?

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 19:04 IST
Last Updated 15 ಏಪ್ರಿಲ್ 2019, 19:04 IST

‘ಸುಮಲತಾ ಅವರಿಗೆ ಮಂಗಳಾರತಿ ಮಾಡಿ’ ಎಂದು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಹೇಳಿದ್ದಾರೆ (ಪ್ರ.ವಾ., ಏ. 13). ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅವರು, ಒಂದು ಕ್ಷೇತ್ರದಲ್ಲಿ ಗೆದ್ದದ್ದಕ್ಕೆ ವಿಜಯದ ಮಂಗಳಾರತಿ, ಮತ್ತೊಂದು ಕ್ಷೇತ್ರದಲ್ಲಿ ಸೋತದ್ದಕ್ಕೆ ಮುಖಕ್ಕೆ ಮಂಗಳಾರತಿ ಎರಡನ್ನೂ ಮಾಡಿಸಿಕೊಂಡಿದ್ದಾರೆ. ಹೀಗಾಗಿ, ಸುಮಲತಾ ಅವರಿಗೆ ತಾವು ಹೇಳಿದ್ದು ಯಾವ ಬಗೆಯ ಮಂಗಳಾರತಿ ಎಂಬುದನ್ನು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಬೇಕು.

ಎಂ.ಎಸ್.ಅಲ್ಲಮಪ್ರಭು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT