ಸರ್ವರ ಏಳಿಗೆಗಾಗಿ ಜಾತಿ- ಮತಗಳನ್ನು ಮೀರಿ ಶ್ರಮಿಸಬೇಕಾದಂತಹ, ಸಮ ಸಮಾಜಕ್ಕೆ ದಾರಿ ತೋರಬೇಕಾದಂತಹ ಸ್ವಾಮೀಜಿಗಳು ಹಾಗೂ ಮಠಗಳ ಪೀಠಾಧ್ಯಕ್ಷರು ಇತ್ತೀಚಿನ ದಿನಗಳಲ್ಲಿ ಯಾವುದೋ ಒಂದು ಜಾತಿ-ಧರ್ಮದ ಪರವಾಗಿ ನಿಲ್ಲುತ್ತಿರುವುದು ವಿಷಾದನೀಯ. ತಾವು ಪ್ರತಿನಿಧಿಸುವ ಜಾತಿಯ ಜನಪ್ರತಿನಿಧಿಗಳಿಗೆ ಮಂತ್ರಿ ಪದವಿ ಕೊಡಿಸಲು, ಜಾತಿಗಾಗಿ ನಿಗಮ-ಮಂಡಳಿಗಳನ್ನು ರಚಿಸಲು ಹಾಗೂ ಯಾವುದೋ ನಿರ್ದಿಷ್ಟ ಮೀಸಲಾತಿ ಗುಂಪಿಗೆ ತಮ್ಮ ಜಾತಿಯನ್ನು ಸೇರಿಸುವ ಬೇಡಿಕೆ ಈಡೇರಿಕೆಗೆ ಮುಂದಾಳತ್ವ ವಹಿಸುತ್ತಿರುವುದು ವಿಪರ್ಯಾಸದ ಸಂಗತಿ.
ಸರ್ವ ಜನಾಂಗಕ್ಕೂ ದಾರಿ ತೋರಿಸಲು ಶ್ರಮಿಸಬೇಕಾದ ಸ್ವಾಮೀಜಿಗಳ ಈ ನಡೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಸಮಾಜದಲ್ಲಿ ಆರೋಗ್ಯಕರ ಬೆಳವಣಿಗೆಯಲ್ಲ.
-ನಟರಾಜು ಜಿ. ಶಾಹೂ, ಕೊಳ್ಳೇಗಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.