ಕಾಶ್ಮೀರದಲ್ಲಿ ಈಚಿನ ದಿನಗಳಲ್ಲಿ ನಿತ್ಯ ನಿರಂತರವಾಗಿ ನಡೆಯುತ್ತಿರುವ ಮುಸ್ಲಿಮೇತರರ ಹತ್ಯೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಲ್ಲಿನ ಭಯೋತ್ಪಾದಕ ಸಂಘಟನೆಗಳ ಮೂಲವನ್ನು ಹುಡುಕಿ ನಿರ್ನಾಮ ಮಾಡಬೇಕಿದೆ. ಇವರಿಗೆ ತರಬೇತಿ ನೀಡುವ ಸಂಸ್ಥೆಗಳು, ಶಸ್ತ್ರಾಸ್ತ್ರ ಬರುವ ದಾರಿಗಳನ್ನು ಸಹ ಹುಡುಕಬೇಕಿದೆ.
ನಿರಪರಾಧಿಗಳ ಮೇಲೆ ನಡೆಯುವ ಈ ದೌರ್ಜನ್ಯಕ್ಕೆ ಕಾರಣವಾಗಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಮಟ್ಟ ಹಾಕಲೇಬೇಕು. ಈವರೆಗಿನ ವಿಧ್ವಂಸಕ ಕೃತ್ಯಗಳನ್ನು ನೋಡಿದರೆ, ದೇಶದ ಕಾನೂನಿಗೆ ಭಯೋತ್ಪಾದಕರು ಕವಡೆಕಾಸಿನ ಕಿಮ್ಮತ್ತನ್ನೂ ಕೊಟ್ಟಿಲ್ಲದಿರುವುದು ಅರಿವಿಗೆ ಬರುತ್ತದೆ. ಕಾನೂನಿನ ಭಯ ಅವರಲ್ಲಿ ಮೂಡಬೇಕು. ದೇಶದ್ರೋಹಿಗಳಿಗೆ ಯಾವುದೇ ರೀತಿಯ ರಿಯಾಯಿತಿ ತೋರಿಸದೆ ಬಗ್ಗುಬಡಿಯಬೇಕಿದೆ. ಪರೋಕ್ಷವಾಗಿ ಇವರಿಗೆ ನೆರವಾಗುವ ಸ್ಥಳೀಯರ ವಿರುದ್ಧ ಕಾನೂನಿನ ಅನ್ವಯ ಕ್ರಮ ಜರುಗಿಸಲಿ.
–ಎಚ್.ಎನ್.ಕಿರಣ್ ಕುಮಾರ್, ಹಳೇಹಳ್ಳಿ, ಗೌರಿಬಿದನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.