ತುಮಕೂರು ಜಿಲ್ಲೆಯಲ್ಲಿ ಎರಡು ತಿಂಗಳಿನಿಂದ ಕಾಡುಪ್ರಾಣಿಗಳ ದಾಳಿಯಿಂದ ಮಾನವನ ಜೀವಹಾನಿ ಮತ್ತು ಬೆಳೆಹಾನಿ ಸಂಭವಿಸಿವೆ. ರಾತ್ರಿ ವೇಳೆ ತೋಟಗಳಿಗೆ ನೀರು ಹಾಯಿಸಲು ಹೋದ ಕೆಲ ರೈತರ ಮೇಲೆ ಆನೆ ದಾಳಿ ನಡೆದಿದೆ. ಒಂದೆಡೆ, ಕಷ್ಟಪಟ್ಟು ಬೆಳೆದ ಬೆಳೆಗೆ ಒಳ್ಳೆಯ ಬೆಲೆ ದೊರಕದು.
ಇನ್ನೊಂದೆಡೆ, ಸರಿರಾತ್ರಿ ನೀಡುವ ವಿದ್ಯುತ್ನ ಕಾರಣಕ್ಕೆ ರೈತಾಪಿ ಸಮುದಾಯವು ಜೀವವನ್ನು ಪಣಕ್ಕಿಟ್ಟು ದುಡಿಯುವಂತಹ ಕೆಟ್ಟ ಸ್ಥಿತಿ. ರೈತರಿಗೆ ಬೆಳಗಿನ ವೇಳೆ ವಿದ್ಯುತ್ ಪೂರೈಸುವ ಮೂಲಕ ಸರ್ಕಾರ ಅವರಿಗೆ ಜೀವನಭದ್ರತೆ ಕಲ್ಪಿಸಬೇಕು.
–ಕೆ.ಬಿ.ಕೆ.ಸ್ವಾಮಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.