ADVERTISEMENT

ಬೇಕಾಗಿದೆ ಯುದ್ಧೋಪಾದಿಯ ಕ್ರಮ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 19:45 IST
Last Updated 24 ಮಾರ್ಚ್ 2020, 19:45 IST

ಕೊರೊನಾ ವೈರಸ್ ಹುಟ್ಟಿಗೆ ಕಾರಣವಾದ ಚೀನಾದಲ್ಲಿ ಅದನ್ನು ನಿರ್ನಾಮ ಮಾಡಲು ಇಡೀ ದೇಶವೇ ಒಂದಾಗಿ ಕೆಲಸ ಮಾಡುತ್ತಿದೆ. ಕೇವಲ ಹತ್ತೇ ದಿನಗಳಲ್ಲಿ ಬಹುದೊಡ್ಡ ಆಸ್ಪತ್ರೆಯೊಂದನ್ನು ಕಟ್ಟಿ, ರೋಗಿಗಳಿಗೆ ಶುಶ್ರೂಷೆ ನೀಡಲಾಯಿತು. ಅಲ್ಲಿಯ ವೈದ್ಯರಿಗೆ ನೀಡಿರುವ ಸಲಕರಣೆಗಳ ಶೇಕಡ ಹತ್ತರಷ್ಟೂ ನಮ್ಮ ದೇಶದ ವೈದ್ಯರಿಗೆ ಇಲ್ಲ. ಸ್ವತಃ ವೈದ್ಯರಿಗೇ ಈ ವೈರಸ್ ತಗುಲದಂತೆ ಮಾಡಲು ಬೇಕಾಗಿರುವ ದಿರಿಸುಗಳು ಇಲ್ಲ. ಕೆಲವೆಡೆ ಕೋವಿಡ್‌– 19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೇ ಸೋಂಕುಪೀಡಿತರಾಗಿರುವುದು ಕಂಡುಬಂದಿದೆ. ಹೀಗಾಗಿ, ಇಂತಹ ಅಗತ್ಯ ವಸ್ತುಗಳನ್ನು ಒದಗಿಸುವಲ್ಲಿ ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.

ಹರೀಶ್ ಹಾಳದಕಟ್ಟಾ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT