ಕ್ರಿಕೆಟ್ ಆಟಗಾರರ ಆಯ್ಕೆಯಲ್ಲಿ ಪ್ರಭಾವ, ವಶೀಲಿ ಮತ್ತು ಲಂಚದ ಪಾತ್ರದ ಬಗೆಗೆ ವದಂತಿಗಳು ಬಹುಕಾಲದಿಂದ ಕೇಳಿಬರುತ್ತಿದ್ದವು. ಆದರೆ ಅದು ಮ್ಯಾಚ್ ಫಿಕ್ಸಿಂಗ್ನಷ್ಟು ಸುದ್ದಿಯಾಗಿರಲಿಲ್ಲ. ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಹೇಳಿಕೆಯೊಂದರಲ್ಲಿ ಈ ವದಂತಿಯನ್ನು ದೃಢೀಕರಿಸಿದ್ದಾರೆ. ಲೀಗ್ ಹಂತದ ಪಂದ್ಯಾವಳಿಯೊಂದಕ್ಕೆ ಆಯ್ಕೆ ಮಾಡಲು ‘ಪ್ರತಿಭೆ ಓಕೆ… ಆದರೆ ಇಂತಿಷ್ಟು ಕೊಟ್ಟರೆ ಆಯ್ಕೆ ಮಾಡಬಹುದು’ ಎಂದು ಆಯ್ಕೆದಾರರು ತಿಳಿಸಿದ್ದು, ಅವರ ತಂದೆ ಇದನ್ನು ಖಡಾಖಂಡಿತವಾಗಿ ನಿರಾಕರಿಸಿದ್ದರಂತೆ.
ಭಾರತದ ತಂಡದಲ್ಲಿ ಕೆಲವರ ಸಾಧನೆಯನ್ನು ಗಮನಿಸಿದಾಗ, ಈ ದಿಸೆಯಲ್ಲಿ ಸಂಶಯಗಳಿಗೆ ಇಂಬು ಸಿಗುತ್ತದೆ. ಮ್ಯಾಚ್ ಫಿಕ್ಸಿಂಗ್ ಅನ್ನೂ ಮೊದಮೊದಲು ತಳ್ಳಿಹಾಕಲಾಗಿತ್ತು. ಅದನ್ನು ಆಳವಾಗಿ ವಿಚಾರಣೆ ಮಾಡಿದಾಗ ಕೆಲವು ‘ವಿಕೆಟ್’ಗಳು ಉರುಳಿದ್ದವು. ಅಕಸ್ಮಾತ್ ಕೊಹ್ಲಿಯವರ ಹೇಳಿಕೆಗೆ ತಾರ್ಕಿಕ ಅಂತ್ಯ ಕಾಣಿಸಿದರೆ, ಏನೇನು ಕರ್ಮಕಾಂಡಗಳು ಹೊರಬರುತ್ತವೋ.
-ರಮಾನಂದ ಶರ್ಮಾ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.