ಮೋಡ ಬಿತ್ತನೆ ಮಾಡಿ ಮಳೆ ಬರಿಸುವ ಅಸ್ಪಷ್ಟ, ನಿಖರತೆ ಇಲ್ಲದ ಯೋಜನೆಗೆ ರಾಜ್ಯ ಸರ್ಕಾರ ₹ 88 ಕೋಟಿ ವ್ಯಯಿಸಲು ಮುಂದಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ, ಸುಮಾರು ನಾನೂರು ವರ್ಷಗಳ ಹಿಂದಿನ, ಎರಡು ಎಕರೆ ವಿಸ್ತೀರ್ಣದ ಕೆರೆಯ ಹೂಳು ತೆಗೆಯುವುದಕ್ಕೆ ₹ 25 ಲಕ್ಷ ಖರ್ಚಾಯಿತು ಎಂದು ಹೇಳಲಾಗಿದೆ.
ಇನ್ನು₹88 ಕೋಟಿಯಲ್ಲಿ ಇಂತಹ ನೂರಾರು ಕೆರೆಗಳ ಹೂಳು ತೆಗೆಯಬಹುದು. ಆ ಮೂಲಕ, ಜಲ ಶೇಖರಣೆಗೆ ಅನುವು ಮಾಡಿಕೊಟ್ಟರೆ ಸುತ್ತಲ ಕಾಡು, ಜಮೀನು, ಬಾವಿಗಳಲ್ಲಿ ತಾನಾಗಿಯೇ ಜಲ ಮಟ್ಟ ಏರಿ, ಮುಂದಿನ ಅನೇಕ ವರ್ಷಗಳ ಕಾಲ ಜಲ ಸುಸ್ಥಿರತೆ ಕಾಪಾಡಿಕೊಳ್ಳಬಹುದು. ಅದು ವೈಜ್ಞಾನಿಕ ಮಾದರಿಯೂ ಹೌದು.
ಸರೋಜಾ ಪ್ರಕಾಶ,ಮಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.