ADVERTISEMENT

ಜಲ ಸುಸ್ಥಿರತೆ: ವೈಜ್ಞಾನಿಕ ಮಾದರಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 17 ಮೇ 2019, 16:32 IST
Last Updated 17 ಮೇ 2019, 16:32 IST

ಮೋಡ ಬಿತ್ತನೆ ಮಾಡಿ ಮಳೆ ಬರಿಸುವ ಅಸ್ಪಷ್ಟ, ನಿಖರತೆ ಇಲ್ಲದ ಯೋಜನೆಗೆ ರಾಜ್ಯ ಸರ್ಕಾರ ₹ 88 ಕೋಟಿ ವ್ಯಯಿಸಲು ಮುಂದಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ, ಸುಮಾರು ನಾನೂರು ವರ್ಷಗಳ ಹಿಂದಿನ, ಎರಡು ಎಕರೆ ವಿಸ್ತೀರ್ಣದ ಕೆರೆಯ ಹೂಳು ತೆಗೆಯುವುದಕ್ಕೆ ₹ 25 ಲಕ್ಷ ಖರ್ಚಾಯಿತು ಎಂದು ಹೇಳಲಾಗಿದೆ.

ಇನ್ನು₹88 ಕೋಟಿಯಲ್ಲಿ ಇಂತಹ ನೂರಾರು ಕೆರೆಗಳ ಹೂಳು ತೆಗೆಯಬಹುದು. ಆ ಮೂಲಕ, ಜಲ ಶೇಖರಣೆಗೆ ಅನುವು ಮಾಡಿಕೊಟ್ಟರೆ ಸುತ್ತಲ ಕಾಡು, ಜಮೀನು, ಬಾವಿಗಳಲ್ಲಿ ತಾನಾಗಿಯೇ ಜಲ ಮಟ್ಟ ಏರಿ, ಮುಂದಿನ ಅನೇಕ ವರ್ಷಗಳ ಕಾಲ ಜಲ ಸುಸ್ಥಿರತೆ ಕಾಪಾಡಿಕೊಳ್ಳಬಹುದು. ಅದು ವೈಜ್ಞಾನಿಕ ಮಾದರಿಯೂ ಹೌದು.

ADVERTISEMENT

ಸರೋಜಾ ಪ್ರಕಾಶ,ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.