ADVERTISEMENT

ಅನುಭವದ ಮಾತು!

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 19:31 IST
Last Updated 4 ಏಪ್ರಿಲ್ 2021, 19:31 IST

‘ಮಮತಾ ದೀದಿ ನೀವು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೀರಿ ಎಂಬ ವಂದಂತಿಗಳಿವೆ. ಅದು ನಿಜವೇ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮಮತಾ ಬ್ಯಾನರ್ಜಿಯವರನ್ನು ಉದ್ದೇಶಿಸಿ ಚುನಾವಣಾ ಪ್ರಚಾರದ ವೇಳೆ ವ್ಯಂಗ್ಯವಾಡಿದ್ದಾರೆ (ಪ್ರ.ವಾ.,ಏ. 3). 2014ರ ಲೋಕಸಭಾ ಚುನಾವಣೆಗೆ ಎರಡು ಕ್ಷೇತ್ರಗಳಲ್ಲಿ (ವಾರಾಣಸಿ, ವಡೋದರ) ಅವರು ಸ್ಪರ್ಧಿಸಿದ್ದರಿಂದಲೇ ಈ ತರಹ ಹೇಳಿರಬಹುದು! ಯಾವತ್ತೂ ನೆನಪುಗಳುಬಹಳ ಮುಖ್ಯ. ತಮ್ಮ ಅನುಭವದ ಮೇರೆಗೆ ಇಂತಹ ಸಲಹೆಯನ್ನು ಕೊಟ್ಟಿರಲೂಬಹುದು!

–ನಿಖಿತಾ ಶಶಾಂಕ್ ಭಟ್, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT