ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮದ ಎಳೆಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ಇನ್ನು ಅದಕ್ಕೆ ಅಂಟಿ ಕೊಂಡಂತೆ ಹಲವಾರು ಇಲಾಖೆಗಳ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರಗಳು ಹೊರಬೀಳುತ್ತಿವೆ.
ಇವುಗಳಿಗೆಲ್ಲ ಹೊಣೆ ಯಾರು, ಈ ವ್ಯವಸ್ಥೆ ಸ್ವಚ್ಛವಾಗುವುದು ಯಾವಾಗ, ಹೀಗೆ ಪ್ರತೀ ನೇಮಕಾತಿಯಲ್ಲೂ ಅಕ್ರಮ ನಡೆಯುತ್ತಾ ಹೋದರೆ ಪ್ರಾಮಾಣಿಕ ಬಡ ವಿದ್ಯಾರ್ಥಿಗಳ ಪಾಡೇನು, ಈ ಅಕ್ರಮಗಳ ನಡುವೆ ಪ್ರತಿಭಾವಂತ ಆಕಾಂಕ್ಷಿ ಗಳು ಮೂಲೆ ಗುಂಪಾದರೆ ಸಮಾಜವು ಉದಯೋನ್ಮುಖ ಬೆಳವಣಿಗೆ ಕಾಣುವುದಾದರೂ ಯಾವಾಗ? ಮುಂಬರುವ ನೇಮಕಾತಿಗಳಲ್ಲಾದರೂ ಸರ್ಕಾರ ಸುವ್ಯವಸ್ಥಿತವಾದ ಕಾನೂನು ಕ್ರಮಗಳನ್ನು ಜಾರಿಗೆ ತಂದು ಅಕ್ರಮಗಳಿಗೆ ಕಡಿವಾಣ ಹಾಕಲಿ.
⇒ಜಯರಾಜ ತೋಳದ್,ಮಲ್ಲಿಗೆವಾಡ, ಕೊಪ್ಪಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.