ADVERTISEMENT

ನಿಂದಿಸುವ ಧಾಟಿ ಏಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 6 ಡಿಸೆಂಬರ್ 2020, 19:30 IST
Last Updated 6 ಡಿಸೆಂಬರ್ 2020, 19:30 IST

ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುರಿತು ರಾಜ್ಯ ಕೃಷಿ ಸಚಿವರು ಕೊಟ್ಟ ಹೇಳಿಕೆಯಲ್ಲಿ, ರೈತಪರ ಕಾಳಜಿಯೇನೋ ಇರಬಹುದು. ಆದರೆ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಹೇಡಿಗಳು ಎಂದು ಕರೆದದ್ದು ಮಾತ್ರ ಸರಿಯಲ್ಲ. ದಿನೇ ದಿನೇ ರೈತರ ಬದುಕು ದುಸ್ತರವಾಗುತ್ತಿರುವ ಈ ಸಮಯದಲ್ಲಿ ಅವರಿಗೆ ಸಾಂತ್ವನ ಹೇಳುವ ಬದಲು, ನಿಂದಿಸುವ ಧಾಟಿಯಲ್ಲಿ ಹೇಳಿದರೆ ಹೇಗೆ ಸಹಿಸಿಕೊಳ್ಳುವುದು? ನಮ್ಮನ್ನಾಳುವವರ ಭಾಷೆ ಹಾಗೂ ಅವರ ಹೇಳಿಕೆಗಳು ಸಕಾರಾತ್ಮಕ ಪರಿಣಾಮ ಬೀರುವಂತೆ ಇರಲಿ.

- ನಾಗರಾಜ್ ಮಾದೇಗೌಡ,ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT