‘ಭೀತಿಯಿಲ್ಲದ ಮಾತು, ನೀತಿಯಿಲ್ಲದ ಮೌನ’ ಎಂಬ ಸಬಿತಾ ಬನ್ನಾಡಿ ಅವರ ಲೇಖನದಲ್ಲಿನ (ಪ್ರ.ವಾ., ನ. 4) ಅಂಶಗಳು ನೂರಕ್ಕೆ ನೂರರಷ್ಟು ಸತ್ಯ. ಮಹಿಳೆಯರ ಕುರಿತ ನಮ್ಮ ಮನೋಧರ್ಮ ಪೂರ್ತಿ ಬದಲಾಗಬೇಕಿದೆ. ದೇಶದಲ್ಲಿ ದಿನವೊಂದಕ್ಕೆ 90 ಅತ್ಯಾಚಾರಗಳು ನಡೆಯುತ್ತವೆ ಎನ್ನುವುದು ಗಾಬರಿ ಮೂಡಿಸುವಂತಹ ಸಂಗತ. ಈ ವಿಕೃತಿಗೆ ಕೊನೆ ಹಾಡಲೇಬೇಕು. ತಪ್ಪಿತಸ್ಥರಿಗೆ ವಿಳಂಬವಿಲ್ಲದೇ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಗುರುತರ ಹೊಣೆಗಾರಿಕೆ ಸರ್ಕಾರದ ಮೇಲಿದೆ.
- ವೀರಂತರೆಡ್ಡಿ,ಹುಮನಾಬಾದ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.