ADVERTISEMENT

ಇಂಥವರನ್ನು ಜನರೇ ತಿರಸ್ಕರಿಸಬೇಕು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2014, 20:00 IST
Last Updated 21 ಫೆಬ್ರುವರಿ 2014, 20:00 IST
ಎ.ಕೆ. ಸುಬ್ಬಯ್ಯ, ಮಾಜಿ ಶಾಸಕ
ಎ.ಕೆ. ಸುಬ್ಬಯ್ಯ, ಮಾಜಿ ಶಾಸಕ   

ಸಂಸತ್ತು, ವಿಧಾನಸಭೆಯ ಕಲಾಪಗಳಿಗೆ ಅಡ್ಡಿಪಡಿ­ಸುವ­ವರಿಗೆ ಅಲ್ಲಿರಲು ಅಧಿಕಾರವಿಲ್ಲ. ಕಳೆದ 5–6 ವರ್ಷಗಳಿಂದ, ದಬ್ಬಾ­ಳಿಕೆ ನಡೆಸುವುದೇ ನಡವಳಿಕೆ ಎಂಬ ಸ್ಥಿತಿ ನಿರ್ಮಾಣ­ವಾಗಿದೆ. ಹಣಬಲ, ಜಾತಿ ಬಲದಿಂದ ಆರಿಸಿ ಬರುತ್ತಿರು­ವವರು ಹೆಚ್ಚಾಗುತ್ತಿರುವ ಕಾರಣ ಹೀಗಾಗುತ್ತಿದೆ. ಅಸಭ್ಯ­ವಾಗಿ ವರ್ತಿಸಿದವರ ವಿರುದ್ಧ ಆಡಳಿತ ಪಕ್ಷವಾಗಲಿ, ಪ್ರತಿಪಕ್ಷ­ವಾಗಲಿ ಕಠಿಣ ಕ್ರಮ ಜರುಗಿಸಿಲ್ಲ.

ಇಂಥ ಸಂಸದರನ್ನು ತಿರಸ್ಕ­ರಿ­ಸುವ ಜಾಗೃತಿ ಜನರಲ್ಲಿ ಮೂಡಬೇಕು. ಅಪರಾಧ ಹಿನ್ನೆಲೆ­ಯವರು ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿಯಮ ರೂಪಿಸಬೇಕು. ಸಂಸದರಿಗೆ ಒಂದು ನೀತಿ ಸಂಹಿತೆ ರೂಪಿಸಿ, ಅದನ್ನು ಉಲ್ಲಂಘಿಸಿದವರು ಸದಸ್ಯತ್ವ ಕಳೆದು­ಕೊಳ್ಳುವಂತೆ ಮಾಡಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.