ADVERTISEMENT

ಬದುಕಿನ ಅನುಭವವಷ್ಟೇ ಮುಖ್ಯ

ವೈದೇಹಿ
Published 25 ಜನವರಿ 2013, 19:59 IST
Last Updated 25 ಜನವರಿ 2013, 19:59 IST
ಬದುಕಿನ ಅನುಭವವಷ್ಟೇ ಮುಖ್ಯ
ಬದುಕಿನ ಅನುಭವವಷ್ಟೇ ಮುಖ್ಯ   

ಸಾಹಿತ್ಯ ಉತ್ಸವಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಮುಖ್ಯ. ಉತ್ಸವ ಜನರ ಮೇಲೆ ಪ್ರಭಾವ ಬೀರಲೂಬಹುದು, ಇಲ್ಲ ಅಂತ ಹೇಳುವಂತಿಲ್ಲ. ಸಾಹಿತ್ಯಕ್ಕೆ ಹೊಸ ಆಯಾಮ? ಅದು ಅವರವರ ಗ್ರಹಿಕೆ ಮತ್ತು ಅನುಭವಗಳ ಮೇಲೆ ಅವಲಂಬಿತ.

ಪ್ರಾಯೋಜಕತ್ವ ಏನೇ ಇದ್ದರೂ, ಸಮ್ಮೇಳನಗಳು ಜನಪರವಾಗಿದ್ದರಷ್ಟೇ, ಜನರನ್ನು ಹೆಚ್ಚು ಹೆಚ್ಚು ಒಳಗೊಂಡರಷ್ಟೇ ಸ್ವಾಗತಾರ್ಹ.
ಸಾಹಿತ್ಯ ಉತ್ಸವಗಳಲ್ಲಿ ಮಂದಿ ಪರಸ್ಪರ ಕಲೆಯುವಿಕೆಯೇ ಬಹಳ ಮುಖ್ಯ. ವಿವಿಧ ಭಾಗದ ಜನರು, ಓದುಗರು, ಬರಹಗಾರರು, ಸಾಹಿತಿಗಳು ಒಂದೆಡೆ ಕಲೆಯುವುದೇ ಒಂದು ಅನುಭವ.
ಸಾಹಿತ್ಯಕ್ಕೆ ಬದುಕಿನ ಅನುಭವ ಹೊರತು ಬೇರೇನೂ ಮುಖ್ಯ ಅಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.