ಎಐ ಚಿತ್ರ
ಭಾರತವು ಕೃಷಿ ಪ್ರಧಾನ ದೇಶವಾಗಿದೆ. ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಾರಂಪರಿಕ ಕೃಷಿ ವಿಕಾಸ ಯೋಜನೆಯೂ ಒಂದು. ರೈತರ ಜೀವನ ಮಟ್ಟವನ್ನು ಸುಧಾರಿಸುವ ಹಾಗೂ ಪರಿಸರ ಸಮತೋಲನೆಯನ್ನು ಕಾಪಾಡುವ ಉದ್ದೇಶದಿಂದ ಈ ಯೋಜನೆಯನ್ನು 2015ರಲ್ಲಿ ಆರಂಭಿಸಲಾಯಿತು.
ಯೋಜನೆಯ ಉದ್ದೇಶಗಳೇನು ?
ಮಣ್ಣಿನ ಆರೋಗ್ಯ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವುದು.
ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವುದು.
ರಾಸಾಯನಿಕಗಳ ಅವಲಂಬನೆ ಕಡಿಮೆ ಮಾಡಿ, ನೈಸರ್ಗಿಕ ವಿಧಾನದ ಮೂಲಕ ಕೃಷಿ ಮಾಡುವುದನ್ನು ರೈತರಿಗೆ ತಿಳಿಸಿಕೊಡುವುದು.
ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಗಳಿಕೆ ಮಾಡುವುದು.
ರಾಸಾಯನಿಕ ರಹಿತ ಹಾಗೂ ಆರೋಗ್ಯಕರ ಆಹಾರದ ಉತ್ಪಾದನೆ ಮಾಡುವುದು.
ರೈತ ಸಂಘಗಳನ್ನು ಬೆಂಬಲಿಸುವುದು.
ಮಾರುಕಟ್ಟೆಗಳೊಂದಿಗೆ ನೇರವಾಗಿ ರೈತರು ಸಂಪರ್ಕ ಸಾಧಿಸಲು ವೇದಿಕೆ ಕಲ್ಪಿಸುವುದು.
ಯೋಜನೆಯ ಪ್ರಯೋಜನಗಳು:
ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ರೈತರಿಗೆ 3 ವರ್ಷಕ್ಕೆ ಪ್ರತಿ ಹೆಕ್ಟೇರ್ಗೆ ₹31,500 ನೆರವು ದೊರೆಯಲಿದೆ. ಈ ಕೆಳಗಿನಂತೆ ಹಣವನ್ನು ವಿಂಗಡಣೆ ಮಾಡಿದೆ.
ಕೃಷಿ ಭೂಮಿಗೆ ಬೇಕಾದ ಸಾವಯವ ಪರಿಕರಗಳಿಗಾಗಿ ₹15,000 ಸಿಗಲಿದೆ.
ಮಾರುಕಟ್ಟೆ, ಪ್ಯಾಕೇಜಿಂಗ್ ಹಾಗೂ ಬ್ರ್ಯಾಂಡಿಂಗ್ಗಾಗಿ ₹4,500 ಸಿಗಲಿದೆ.
ಪ್ರಮಾಣೀಕರಣಕ್ಕಾಗಿ ₹3,000 ಸಿಗಲಿದೆ.
ರೈತರಿಗೆ ತರಬೇತಿ ಹಾಗೂ ಅವರ ಸಾಮರ್ಥ್ಯ ವೃದ್ಧಿಗಾಗಿ ₹9,000 ಸಿಗಲಿದೆ.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. https://jaivikkheti.in
ಅಗತ್ಯವಿರುವ ದಾಖಲೆಗಳು:
ಭೂ ದಾಖಲೆಗಳು
ಆಧಾರ್ ಸಂಖ್ಯೆ
ಜಾತಿ ಪ್ರಮಾಣಪತ್ರ (ಎಸ್ಸಿ, ಎಸ್ಟಿ ಹಾಗೂ ಒಬಿಸಿ ಗೆ ಮಾತ್ರ)
ಬ್ಯಾಂಕ್ ವಿವರಗಳು
ಡಿಪಿಆರ್
ಫೋನ್ ವಿವರಗಳು
ಛಾಯಾಚಿತ್ರಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.