ಬೆಂಗಳೂರು: ಜಾರ್ಖಂಡ್ನಲ್ಲಿ ಏಪ್ರಿಲ್ 5 ರಿಂದ 8ರ ವರೆಗೆ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ಬಾಲಕ ಮತ್ತು ಬಾಲಕಿಯರ ತಂಡಗಳ ಆಯ್ಕೆ ಟ್ರಯಲ್ಸ್ ಮಾರ್ಚ್ 2 ರಿಂದ 5ರ ವರೆಗೆ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಮಾ. 2 ರಿಂದ 5ರ ವರೆಗೆ ನಡೆಯುವ `ಕರ್ನಾಟಕ ಬಾಲಕೇಸರಿ~, `ಮಹಾನ್ ಭಾರತ್ ಕೇಸರಿ~ ಮತ್ತು `ಕರ್ನಾಟಕ ಕೇಸರಿ~ ಕುಸ್ತಿ ಚಾಂಪಿಯನ್ಷಿಪ್ ವೇಳೆ ಆಯ್ಕೆ ಟ್ರಯಲ್ಸ್ ನಡೆಯಲಿದೆ ಎಂದು ಕರ್ನಾಟಕ ಕುಸ್ತಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಆಯ್ಕೆ ಟ್ರಯಲ್ಸ್ನಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಜನನ ಪ್ರಮಾಣಪತ್ರವನ್ನು ತರಬೇಕು. ಹೆಚ್ಚಿನ ಮಾಹಿತಿಗೆ ಎನ್.ಆರ್. ನರಸಿಂಹ (ಪ್ರಧಾನ ಕಾರ್ಯದರ್ಶಿ, 9844123303) ಅವರನ್ನು ಸಂಪರ್ಕಿಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.