ಬೆಂಗಳೂರು: ಕಿಶನ್ ಬಿದರೆ (ಅಜೇಯ 84) ಹಾಗೂ ಬಿ.ತನು (28ಕ್ಕೆ5) ಅವರ ಉತ್ತಮ ಆಟದ ಬಲದಿಂದ ಮೈಸೂರಿನ ಎನ್.ಆರ್. ಸ್ಪೋರ್ಟ್ಸ್ ಗ್ರೂಪ್ ತಂಡ ಕೆಎಸ್ಸಿಎ ವತಿಯಿಂದ ಇಲ್ಲಿ ನಡೆದ ಗುಂಪು ಎರಡರ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯದಲ್ಲಿ ಎನ್.ಆರ್. ಸ್ಪೋರ್ಟ್ಸ್ ತಂಡ 169ರನ್ಗಳಿಂದ ಸೌತ್ ವೆಸ್ಟರ್ನ್ ರೈಲ್ವೆ ತಂಡದ ಎದುರು ಗೆದ್ದಿದೆ.
ಸಂಕ್ಷಿಪ್ತ ಸ್ಕೋರು: ಎನ್ಆರ್ ಸ್ಪೋರ್ಟ್ಸ್ ಗ್ರೂಪ್, ಮೈಸೂರು: 40 ಓವರ್ಗಳಲ್ಲಿ 6 ವಿಕೆಟ್ಗೆ 299 (ಯಶಸ್ವಿನ್ ಗೌಡ 67, ಕಿಶನ್ ಬಿದರೆ 84; ಅರುಣ್ 55ಕ್ಕೆ3).
ಸೌತ್ ವೆಸ್ಟರ್ನ್ ರೈಲ್ವೆ ಇನ್ಸ್ಟ್ಯೂಟ್, ಮೈಸೂರು: 31.2 ಓವರ್ಗಳಲ್ಲಿ 130 (ಅರುಣ್ 44, ಸುಹಾಸ್ 27, ಉತ್ತಮ್ ಅಯ್ಯಪ್ಪ 15ಕ್ಕೆ2, ಶಾಂತರಾಜು 22ಕ್ಕೆ2, ಬಿ.ತನು 28ಕ್ಕೆ5). ಫಲಿತಾಂಶ: ಎನ್.ಆರ್. ಸ್ಪೋರ್ಟ್ಸ್ ತಂಡಕ್ಕೆ 169 ರನ್ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.