ADVERTISEMENT

ಟೀಮ್ ಇಂಡಿಯಾಕ್ಕೆ ದ್ರಾವಿಡ್ ಹಾರೈಕೆಯ ಬಲ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಕಾವು ಏರತೊಡಗಿದೆ. ಭಾರತದ ಎಲ್ಲರ ಮನದಲ್ಲಿಯೂ ‘ನಮ್ಮ ತಂಡವೇ ಚಾಂಪಿಯನ್ ಆಗಬೇಕು’ ಎನ್ನುವ ಆಶಯ. ಇದೇ ಆಶಯದೊಂದಿಗೆ ಶುಭಹಾರೈಕೆಗಳನ್ನು ಸಂಗ್ರಹಿಸುತ್ತ ಸಾಗಿರುವ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗದ ಕ್ರಿಕೆಟ್ ರಥದಲ್ಲಿ ಮಂಗಳವಾರ ರಾಹುಲ್ ದ್ರಾವಿಡ್ ಹೊಳಪಿನಿಂದ ಹೊಳೆದರು.

‘ಬನ್ನಿ ನಮ್ಮೊಂದಿಗೆ ಭಾರತ ಕ್ರಿಕೆಟ್ ತಂಡದ ವಿಜಯಕ್ಕೆ ಹಾರೈಸಿ’ ಎಂದು ಭಾರತ ತಂಡದ ಅಭಿಮಾನಿ ಬಳಗವನ್ನು ಕೈಬೀಸಿ ಕರೆಯುತ್ತಿರುವ ರಥವು ಇಂದಿರಾನಗರದ ಸುತ್ತಲಿನ ಪ್ರದೇಶದಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಬೃಹತ್ ಬ್ಯಾಟ್ ಮೇಲೆ ರಾಹುಲ್ ದ್ರಾವಿಡ್ ಅವರೂ ‘ಬೆಸ್ಟ್ ವಿಷಸ್ ಟು ಟೀಮ್ ಇಂಡಿಯಾ’ ಎನ್ನುವ ಸಂದೇಶದ ಜೊತೆಗೆ ತಮ್ಮ ಹಸ್ತಾಕ್ಷರವನ್ನೂ ಮಾಡಿದರು.

ದ್ರಾವಿಡ್ ಹಸ್ತಾಕ್ಷರ ಮಾಡಿ ವಾಹನದಿಂದ ಕೆಳಗೆ ಇಳಿಯುತ್ತಿದ್ದಂತೆಯೇ ತಮ್ಮ ನೆಚ್ಚಿನ ಕ್ರಿಕೆಟಿಗ ಬರೆದ ಸಂದೇಶವೇನೆಂದು ನೋಡಲು ಯುವಕ-ಯುವತಿಯರು ಆಸಕ್ತಿ ತೋರಿದ್ದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.