ಬೆಂಗಳೂರು: ಕರ್ನಾಟಕದ ಮಹಿಳೆಯರ ತಂಡ ಭಿಲಾಯ್ನಲ್ಲಿ ನಡೆಯುತ್ತಿರುವ ಅಂತರ ರಾಜ್ಯಗಳ ಟೆನಿಸ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ.
ಸೆಮಿಫೈನಲ್ನಲ್ಲಿ ಕರ್ನಾಟಕ 0–2ರಲ್ಲಿ ಮಹಾರಾಷ್ಟ್ರದ ಎದುರು ಸೋತಿದೆ. ವಂಶಿತಾ ಪತಂಜ 0–6, 2–6ರಲ್ಲಿ ಮಿಹಿಕಾ ಯಾದವ್ ಎದುರೂ, ಎಸ್.ಸೋಹಾ 0–6, 3–6ರಲ್ಲಿ ರುತುಜಾ ಬೋಸ್ಲೆ ಮೇಲೂ ನಿರಾಸೆ ಅನುಭವಿಸಿದರು.
ಫೈನಲ್ನಲ್ಲಿ ಮಹಾರಾಷ್ಟ್ರ ತಂಡ ದೆಹಲಿ ಎದುರು ಆಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.