ADVERTISEMENT

ಟೆನಿಸ್: ಚೊಚ್ಚಲ ಪ್ರಶಸ್ತಿ ಗೆದ್ದ ಕರುಣ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST

ನವದೆಹಲಿ (ಐಎಎನ್‌ಎಸ್): ಕರುಣ್‌ಉದಯ್ ಸಿಂಗ್ ಅವರು ತಮ್ಮ ವೃತ್ತಿಜೀವನದ ಮೊದಲ ಐಟಿಎಫ್ ಟೆನಿಸ್ ಟೂರ್ನಿ ಪ್ರಶಸ್ತಿ  ಗೆದ್ದುಕೊಂಡರು.ಡಿಎಲ್‌ಟಿಎ ಕಾಂಪ್ಲೆಕ್ಸ್ ಕೋರ್ಟ್‌ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಕರುಣ್ 6-4, 6-2 ರಲ್ಲಿ ಭಾರತದವರೇ ಆದ ವಿಜಯಂತ್ ಮಲಿಕ್ ಅವರನ್ನು ಮಣಿಸಿದರು.

ಈ ಮೂಲಕ ಕರುಣ್ ಟೂರ್ನಿಯಲ್ಲಿ ಪ್ರಶಸ್ತಿ ಡಬಲ್ ಗೌರವ ಪಡೆದರು. ಅವರು ರಷ್ಯಾದ ವಿತಾಲಿ ರೆಶೆಟ್ನಿಕೊವ್ ಜೊತೆ ಶುಕ್ರವಾರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದರು.

ಮಲಿಕ್ ವಿರುದ್ಧದ ಫೈನಲ್‌ನಲ್ಲಿ ಕರುಣ್ ಹೆಚ್ಚಿನ ಒತ್ತಡ ಅನುಭವಿಸಲಿಲ್ಲ. ಒಂದು ಗಂಟೆ ಹದಿನೇಳು ನಿಮಿಷಗಳ ಹೋರಾಟದಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ವೇಗದ ಸರ್ವ್ ಮತ್ತು ಶಕ್ತಿಶಾಲಿ ಗ್ರೌಂಡ್‌ಸ್ಟ್ರೋಕ್‌ಗಳ ಮೂಲಕ ಅವರು ಎದುರಾಳಿಯನ್ನು ಕಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.