ಮೀರ್ಪುರ (ಪಿಟಿಐ): `ನಾನು ದೇವರಲ್ಲ. ಕೇವಲ ಸಚಿನ್ ತೆಂಡೂಲ್ಕರ್ ...~
ಶತಕಗಳ ಶತಕ ಗಳಿಸಿ ಸಾಧನೆ ಮಾಡಿದ ಮುಂಬೈಕರ್ ಬಗ್ಗೆ ಅಭಿಮಾನಿಗಳು ಪ್ರೀತಿಯಿಂದ `ದೇವರು~ ಅಂತಲೇ ಕರೆಯುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು `ನಾನು ದೇವರಲ್ಲ~ ಎನ್ನುವ ಮಾತನ್ನು ಒತ್ತಿ ಹೇಳಿದ್ದಾರೆ.
`ನಾನು ಖಂಡಿತವಾಗಿಯೂ ಪ್ರಾಮಾಣಿಕ. ಮಾನವೀಯ ಗುಣಗಳನ್ನು ಹೊಂದಿದ್ದೇನೆ. ಅಷ್ಟೇ ಅಲ್ಲ ಭಾವನಾ ಜೀವಿಯೂ ಹೌದು. ಇದಷ್ಟೆ ನನಗೆ ಗೊತ್ತು~ ಎಂದು ತಿಳಿಸಿದ್ದಾರೆ.
`ಶತಕ ಗಳಿಸುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ತಂಡದ ಒಳಿತಿಗೆ ಮಾತ್ರ ಆಡುತ್ತಿದ್ದೆ. ಪ್ರತಿಬಾರಿಯೂ ನಾನು ಸ್ಕೋರು ಬೋರ್ಡ್ ನೋಡಿದಾಗ, ರನ್ ಸರಾಸರಿಯನ್ನು ಗಮನಿಸುತ್ತಿದ್ದೆ. ತಂಡಕ್ಕೆ ಇನ್ನೂ ಎಷ್ಟು ರನ್ ಅಗತ್ಯವಿದೆ ಎಂದು ಯೋಚಿಸುತ್ತಿದ್ದೆ~ ಎನ್ನುತ್ತಾರೆ ಲಿಟಲ್ ಮಾಸ್ಟರ್.
`ನನ್ನ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ಕೆಲ ವರದಿಗಳಲ್ಲಿ ಟೀಕೆ ಸಹ ಮಾಡಲಾಗಿದೆ. ಇದ್ಯಾವುದರ ಬಗ್ಗೆ ತಿರುಗಿಯೂ ನೋಡಲಿಲ್ಲ. ನನ್ನ ಕೆಲಸವನ್ನು ನಾನು ಮಾಡಿದೆ. ಏಳು-ಬೀಳುಗಳ ಜೀವನದಲ್ಲಿ ಸಹಜ ಎನ್ನುವುದನ್ನು ಮೊದಲೇ ಅರಿತಿದ್ದೇನೆ. ಇವುಗಳನ್ನು ಅನುಭವಿಸದವರು ಸಾಧನೆ ಮಾಡಲು ಅಸಾಧ್ಯ~ ಎನ್ನುವುದು ಸಚಿನ್ ಅಭಿಪ್ರಾಯ.
ವಿಶ್ವಕಪ್ ನಂತರ ಸಚಿನ್ ನಿವೃತ್ತಿ ಹೊಂದಬೇಕಿತ್ತು ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, `ಭಾರತ ವಿಶ್ವಕಪ್ ಜಯಿಸಿದ ನಂತರ ನಿವೃತ್ತಿ ಹೊಂದಿದ್ದರೆ, ಅದು ಸ್ವಾರ್ಥವೆನಿಸುತ್ತಿತ್ತು~ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.