ADVERTISEMENT

ಬಂಗಾಳ ಕ್ರಿಕೆಟ್‌ ತಂಡಕ್ಕೆ ಮುನ್ನಡೆ

ರೋನಿತ್‌, ಗೌತಮ್‌ಗೆ ಮೂರು ವಿಕೆಟ್‌

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 19:30 IST
Last Updated 16 ಆಗಸ್ಟ್ 2016, 19:30 IST
ಬೆಂಗಳೂರಿನಲ್ಲಿ ನಡೆಯುತ್ತಿರುವ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮಂಗಳವಾರ ಕೆಎಸ್‌ಸಿಎ ಇಲೆವೆನ್‌ ತಂಡದ ರೋನಿತ್‌ ಮೋರೆ ಅಂಪೈರ್‌ಗೆ ವಿಕೆಟ್‌ಗಾಗಿ ಮನವಿ ಸಲ್ಲಿಸಿದ ಕ್ಷಣ –ಪ್ರಜಾವಾಣಿ ಚಿತ್ರ/ಆರ್‌. ಶ್ರೀಕಂಠ ಶರ್ಮಾ
ಬೆಂಗಳೂರಿನಲ್ಲಿ ನಡೆಯುತ್ತಿರುವ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮಂಗಳವಾರ ಕೆಎಸ್‌ಸಿಎ ಇಲೆವೆನ್‌ ತಂಡದ ರೋನಿತ್‌ ಮೋರೆ ಅಂಪೈರ್‌ಗೆ ವಿಕೆಟ್‌ಗಾಗಿ ಮನವಿ ಸಲ್ಲಿಸಿದ ಕ್ಷಣ –ಪ್ರಜಾವಾಣಿ ಚಿತ್ರ/ಆರ್‌. ಶ್ರೀಕಂಠ ಶರ್ಮಾ   

ಬೆಂಗಳೂರು: ಪ್ರಸೆನ್‌ಜಿತ್‌ ದಾಸ್‌ (74; 111ಎ, 13ಬೌಂ) ಅವರ ಜವಾಬ್ದಾರಿ ಯುತ ಬ್ಯಾಟಿಂಗ್‌ ನೆರವಿನಿಂದ ಬಂಗಾಳ ಕ್ರಿಕೆಟ್‌ ಸಂಸ್ಥೆ ತಂಡ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಶ್ರಯದ ತಿಮ್ಮಪ್ಪಯ್ಯ ಸ್ಮಾರಕ ಆಹ್ವಾನಿತ  ಕ್ರಿಕೆಟ್‌ ಟೂರ್ನಿಯ ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಗಳಿಸಿದೆ.

ಆಲೂರಿನ ಒಂದನೇ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಒಂದು ವಿಕೆಟ್‌ಗೆ 93ರನ್‌ಗಳಿಂದ ಮಂಗಳವಾರ   ಆಟ ಮುಂದುವರಿಸಿದ ಬಂಗಾಳ ತಂಡ ಮೊದಲ ಇನಿಂಗ್ಸ್‌ನಲ್ಲಿ 80.5 ಓವರ್‌ಗಳಲ್ಲಿ 209ರನ್‌ಗಳಿಗೆ ಆಲೌಟ್‌ ಆಯಿತು.

79ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ ಕೆಎಸ್‌ಸಿಎ ಇಲೆವೆನ್‌ ದಿನದಾಟದ ಅಂತ್ಯಕ್ಕೆ 18 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 52ರನ್‌ ಗಳಿಸಿದೆ.

ಆತಿಥೇಯರು ಮೊದಲ ಇನಿಂಗ್ಸ್‌ ನಲ್ಲಿ 59.3 ಓವರ್‌ಗಳಲ್ಲಿ 130ರನ್‌ ಕಲೆಹಾಕಿದ್ದರು.

ಸಂಕ್ಷಿಪ್ತ ಸ್ಕೋರ್‌: ಕೆಎಸ್‌ಸಿಎ ಇಲೆವೆನ್‌: ಮೊದಲ ಇನಿಂಗ್ಸ್‌: 59.3 ಓವರ್‌ಗಳಲ್ಲಿ 130 ಮತ್ತು  18 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 52 (ಆರ್‌. ಸಮರ್ಥ್‌ ಬ್ಯಾಟಿಂಗ್‌ 20, ಮಯಂಕ್‌ ಅಗರವಾಲ್‌ ಬ್ಯಾಟಿಂಗ್‌ 31).

ಬಂಗಾಳ ಕ್ರಿಕೆಟ್‌ ಸಂಸ್ಥೆ: ಪ್ರಥಮ ಇನಿಂಗ್ಸ್‌: 80.5 ಓವರ್‌ಗಳಲ್ಲಿ 209 (ಪ್ರಸೆನ್‌ಜಿತ್‌ ದಾಸ್‌ 74, ಸುದೀಪ್‌ ಚಟರ್ಜಿ  20, ಪಂಕಜ್‌ ಸಹಾನಿ 33; ರೋನಿತ್‌ ಮೋರೆ 33ಕ್ಕೆ3, ಅಬ್ರಾರ್‌ ಖಾಜಿ 32ಕ್ಕೆ2, ಕೆ. ಗೌತಮ್‌ 54ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.