ADVERTISEMENT

ಮೈಸೂರು ಜಿಲ್ಲೆ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 20:40 IST
Last Updated 15 ಮಾರ್ಚ್ 2018, 20:40 IST

ಬೆಂಗಳೂರು: ನಿತಿನ್‌ ಸಿದ್ದ ಅವರ ಎರಡು ಗೋಲುಗಳ ಬಲದಿಂದ ಮೈಸೂರು ಜಿಲ್ಲೆ ತಂಡ ಮಂಡ್ಯದಲ್ಲಿ ನಡೆದ ಕೆಎಸ್‌ಎಫ್‌ಎ ವತಿಯ ಅಂತರ ಜಿಲ್ಲೆಗಳ ಫುಟ್‌ಬಾಲ್ ಟೂರ್ನಿಯಲ್ಲಿ ಜಯಭೇರಿ ದಾಖಲಿಸಿದೆ.

ಗುರುವಾರದ ಪಂದ್ಯದಲ್ಲಿ ಮೈಸೂರು ತಂಡ 2–0 ಗೋಲುಗಳಲ್ಲಿ ಮಂಡ್ಯ ಜಿಲ್ಲೆ ತಂಡಕ್ಕೆ ಸೋಲುಣಿಸಿದೆ. ನಿತಿನ್ ಸಿದ್ದ (48, 58ನೇ ನಿ.) ಎರಡು ಗೋಲುಗಳನ್ನು ತಂದಿತ್ತರು.

ದಿನದ ಇನ್ನೊಂದು ಪಂದ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 2–0 ಗೋಲುಗಳಲ್ಲಿ ಕೋಲಾರ ಜಿಲ್ಲೆ ಎದುರು ಗೆದ್ದಿದೆ. ವಿಜಯೀ ತಂಡದ ವಸೀಂ (16ನೇ ನಿ.) ಹಾಗೂ ವಿನು (45ನೇ ನಿ.) ತಲಾ ಒಂದು ಗೋಲು ತಂದಿತ್ತರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.