ADVERTISEMENT

ರಕ್ಷಿತ್, ಅರ್ಚನಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST

ಬೆಂಗಳೂರು: ಮಲ್ಲೇಶ್ವರಂ ಅಸೋಸಿಯೇಶನ್‌ನ ಆರ್.ಬಿ. ರಕ್ಷಿತ್ ಹಾಗೂ ಸಿಸಿಎಯ ಅರ್ಚನಾ ಕಾಮತ್ ಇಲ್ಲಿ ನಡೆಯುತ್ತಿರುವ ಸಿವಿಎಲ್ ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಸಬ್ ಜೂನಿಯರ್ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಇಂಡಿಯನ್ ಜಿಮ್ಖಾನಾದಲ್ಲಿ ಶುಕ್ರವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ರಕ್ಷಿತ್ 11-8, 12-10, 11-8 ರಲ್ಲಿ ಹೊರೈಜನ್‌ನ ಸುಚೇತ್ ಶೆಣೈ ಅವರನ್ನು ಮಣಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ರಕ್ಷಿತ್ 11-6, 11-6, 8-11, 14-16, 11-9 ರಲ್ಲಿ ಶ್ರೇಯಸ್ ಕುಲಕರ್ಣಿ ವಿರುದ್ಧವೂ, ಸುಚೇತ್ 4-11, 11-7, 11-7, 11-9 ರಲ್ಲಿ ಕರಣ್ ಮೇಲೂ ಗೆಲುವು ಪಡೆದಿದ್ದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಅರ್ಚನಾ 11-9, 3-11, 7-11, 11-6, 11-9 ರಲ್ಲಿ ಪಿಟಿಟಿಎಯ ಎಂ.ವಿ. ಸ್ಫೂರ್ತಿ ಎದುರು ಪ್ರಯಾಸದ ಜಯ ಸಾಧಿಸಿದರು. 1-2 ರಲ್ಲಿ ಹಿನ್ನಡೆ ಅನುಭವಿಸಿದ್ದ ಅರ್ಚನಾ ಬಳಿಕ ಚುರುಕಿನ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು.

ಇದಕ್ಕೂ ಮುನ್ನ ನಡೆದ ನಾಲ್ಕರಘಟ್ಟದ ಪಂದ್ಯಗಳಲ್ಲಿ ಅರ್ಚನಾ 11-5, 9-11, 11-5, 11-6 ರಲ್ಲಿ ದಿಶಾ ಗುಪ್ತಾ ಜಯ ಸಾಧಿಸಿದ್ದರೆ, ಸ್ಫೂರ್ತಿ 11-2, 11-6, 12-10 ರಲ್ಲಿ ವಿ. ಕುಶಿ ಅವರನ್ನು ಮಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.