ಬೆಂಗಳೂರು: ಉತ್ತಮ ಆಟ ಆಡಿದ ಬಿ.ರಕ್ಷಿತ್ ಮತ್ತು ಮರಿಯಾ ರೋನಿ ಅವರು ಕೆನರಾ ಯೂನಿಯನ್ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಮಲ್ಲೇಶ್ವರಮ್ನ ಪ್ರಕಾಶ್ ಕೋರ್ಟ್ಸ್ ನಲ್ಲಿ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಮರಿಯಾ 11-6, 11-6, 11-5, 11-3ರ ನೇರ ಗೇಮ್ಗಳಿಂದ ಕೌಮುದಿ ಪಟ್ನಾಕರ್ ವಿರುದ್ಧ ಗೆದ್ದರು.
ಸೆಮಿಫೈನಲ್ನಲ್ಲಿ ಕೌಮುದಿ 7–11, 11–7, 11–9, 11–7, 7–11, 11–8ರಲ್ಲಿ ಎಂ.ವಿ.ಸ್ಫೂರ್ತಿ ಎದುರೂ, ಮರಿಯಾ 11–7, 8–11, 9–11, 11–4, 5–11, 11–8, 11–6ರಲ್ಲಿ ಸಂಯುಕ್ತಾ ವಿರುದ್ಧವೂ ವಿಜಯಿಯಾಗಿದ್ದರು.
ರಕ್ಷಿತ್ ಚಾಂಪಿಯನ್: ಪುರುಷರ ಸಿಂಗಲ್ಸ್ನಲ್ಲಿ ರಕ್ಷಿತ್ ಚಾಂಪಿಯನ್ ಆದರು. ಫೈನಲ್ನಲ್ಲಿ ರಕ್ಷಿತ್ 11–6, 11–6, 11–7, 5–11, 11–7ರಲ್ಲಿ ವಿ.ಪಿ.ಚರಣ್ ಅವರನ್ನು ಸೋಲಿಸಿದರು.
ಸೆಮಿಫೈನಲ್ನಲ್ಲಿ ರಕ್ಷಿತ್ 11–3, 11–9, 11–5, 11–7ರಲ್ಲಿ ಕೆ.ಜೆ.ಆಕಾಶ್ ಎದುರೂ, ಚರಣ್ 11–8, 11–4, 11–13, 11–8, 11–6ರಲ್ಲಿ ನಿಖಿಲ್ ನಂದಾ ವಿರುದ್ಧವೂ ಗೆದ್ದಿದ್ದರು.
ಅನರ್ಘ್ಯ ಮುಡಿಗೆ ಕಿರೀಟ: ಜೂನಿಯರ್ ಬಾಲಕಿಯರ ಸಿಂಗಲ್ಸ್ನಲ್ಲಿ ಅನರ್ಘ್ಯ ಮಂಜುನಾಥ್ ಕಿರೀಟ ಮುಡಿಗೇರಿಸಿಕೊಂಡರು.
ಫೈನಲ್ನಲ್ಲಿ ಅನರ್ಘ್ಯ 12–10, 11–5, 12–10, 14–12ರಲ್ಲಿ ಜಿ.ಯಶಸ್ವಿನಿ ಅವರನ್ನು ಪರಾಭವಗೊಳಿಸಿದರು.
ಯೂತ್ ಬಾಲಕರ ವಿಭಾಗದ ಪ್ರಶಸ್ತಿ ಬಿ.ರಕ್ಷಿತ್ ಅವರ ಪಾಲಾಯಿತು.
ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ರಕ್ಷಿತ್ 11–5, 11–8, 11–7, 10–12, 11–7ರಲ್ಲಿ ಶ್ರೇಯಸ್ ಕುಲಕರ್ಣಿ ವಿರುದ್ಧ ಗೆದ್ದರು.
ನಾನ್ ಮೆಡಲಿಸ್ಟ್ ಸಿಂಗಲ್ಸ್ನಲ್ಲಿ ಕೆ.ಸುದರ್ಶನ್ ಅವರು ಟ್ರೋಫಿ ಗೆದ್ದರು.
ಫೈನಲ್ನಲ್ಲಿ ಸುದರ್ಶನ್ 11–8, 11–5, 12–10ರಲ್ಲಿ ಭಾಸ್ಕರ್ ಮೈಸೂರು ಅವರನ್ನು ಮಣಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.