ನವದೆಹಲಿ (ಪಿಟಿಐ): ಕೇರಳದ ಅಥ್ಲೀಟ್ ರೆಂಜಿತ್ ಮಹೇಶ್ವರಿಗೆ ಅರ್ಜುನ ಪ್ರಶಸ್ತಿ ನೀಡದಿರಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ.
2008 ರಲ್ಲಿ ರೆಂಜಿತ್ ನಿಷೇಧಿತ ಮದ್ದು ಸೇವಿಸಿ ಸಿಕ್ಕಿಬಿದ್ದು, ಮೂರು ತಿಂಗಳ ನಿಷೇಧ ಶಿಕ್ಷೆ ಅನುಭವಿಸಿದ್ದರು ಎಂಬುದು ಖಚಿತವಾದ ಕಾರಣ ಸಚಿವಾಲಯ ಈ ತೀರ್ಮಾನ ತೆಗೆದು ಕೊಂಡಿದೆ. ಇದರೊಂದಿಗೆ ರೆಂಜಿತ್ ಅವರ ಅರ್ಜುನ ಪ್ರಶಸ್ತಿಗೆ ಸಂಬಂಧಿಸಿ ದಂತೆ ಎದ್ದಿದ್ದ ಅನಿಶ್ಚಿತತೆಗೆ ತೆರೆಬಿದ್ದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.