ADVERTISEMENT

ಶ್ರೀಕಾಂತ್‌ಗೆ ಬ್ಯಾಟ್‌ ಉಡುಗೊರೆ ನೀಡಿದ ಮಹೇಂದ್ರ ಸಿಂಗ್‌ ದೋನಿ

ಪಿಟಿಐ
Published 20 ಮೇ 2018, 19:30 IST
Last Updated 20 ಮೇ 2018, 19:30 IST
ಶ್ರೀಕಾಂತ್‌ಗೆ ಬ್ಯಾಟ್‌ ಉಡುಗೊರೆ ನೀಡಿದ ಮಹೇಂದ್ರ ಸಿಂಗ್‌ ದೋನಿ
ಶ್ರೀಕಾಂತ್‌ಗೆ ಬ್ಯಾಟ್‌ ಉಡುಗೊರೆ ನೀಡಿದ ಮಹೇಂದ್ರ ಸಿಂಗ್‌ ದೋನಿ   

ನವದೆಹಲಿ: ಕ್ರಿಕೆಟಿಗ ಮಹೇಂದ್ರ ಸಿಂಗ್‌ ದೋನಿ ಅವರು ಸಹಿ ಮಾಡಿದ ಬ್ಯಾಟ್‌ ಅನ್ನು ಬಿಸಿಸಿಐನ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ಅವರು ಬ್ಯಾಡ್ಮಿಂಟನ್‌ ಆಟಗಾರ ಕಿದಂಬಿ ಶ್ರೀಕಾಂತ್‌ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಹೈದರಾಬಾದ್‌ನಲ್ಲಿರುವ ಪುಲ್ಲೇಲ ಗೋಪಿಚಂದ್‌ ಅವರ ಅಕಾಡೆಮಿಗೆ ತೆರಳಿದ ಪ್ರಸಾದ್‌ ಅವರು ಶ್ರೀಕಾಂತ್‌ ಅವರಿಗೆ ಈ ಬ್ಯಾಟ್‌ ನೀಡಿದ್ದಾರೆ.

‘ಶ್ರೀಕಾಂತ್‌ ಅವರು ದೋನಿ ಅಭಿಮಾನಿ. ಒಂದು ದಿನ ನನ್ನನ್ನು ಭೇಟಿ ಮಾಡಿದ್ದ ಶ್ರೀಕಾಂತ್ ಅವರು ದೋನಿಯಿಂದ ಉಡುಗೊರೆ ಪಡೆಯುವ ಆಸೆ ಇದೆ ಎಂದು ಹೇಳಿದ್ದರು. ಆಗ, ಬ್ಯಾಡ್ಮಿಂಟನ್‌ನಲ್ಲಿ ಅಮೋಘ ಸಾಧನೆ ಮಾಡಿದರೆ ಮಾತ್ರ ನಿಮ್ಮ ಆಸೆಯನ್ನು ಪೂರೈಸುತ್ತೇನೆ ಎಂದು ಅವರಿಗೆ ಹೇಳಿದ್ದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಶ್ರೀಕಾಂತ್‌ ಅವರ ಆಸೆಯ ಬಗ್ಗೆ ದೋನಿ ಅವರಿಗೆ ಹೇಳಿದೆ. ಆಗ ದೋನಿ ತಮ್ಮ ಸಹಿ ಇರುವ ಬ್ಯಾಟ್‌ ಆನ್ನು ಶ್ರೀಕಾಂತ್‌ ಗೆ ನೀಡಲು ಸಂತಸದಿಂದ ಒಪ್ಪಿದ್ದರು’ ಎಂದು ಪ್ರಸಾದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.