ADVERTISEMENT

ಸರ್ಫಿಂಗ್ ರದ್ದು

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST

ಮಂಗಳೂರು: ಮಂತ್ರ ಸರ್ಫ್‌ ಕ್ಲಬ್‌ ಮತ್ತು ಕೆನರಾ ಸರ್ಫಿಂಗ್‌ ಆಂಡ್‌ ವಾಟರ್‌ ಪ್ರಮೋಷನ್‌ ಕೌನ್ಸಿಲ್‌ ಸಹಯೋಗದಲ್ಲಿ ಇದೇ 2 ರಿಂದ ಆರಂಭವಾಗಬೇಕಿದ್ದ ಚೊಚ್ಚಲ ಆವೃತ್ತಿಯ ಮಾನ್ಸೂನ್‌ ಸರ್ಫ್‌ ಚಾಲೆಂಜ್‌ ಟೂರ್ನಿಯನ್ನು ಜಿಲ್ಲಾಡಳಿತ ರದ್ದುಪಡಿಸಿದೆ.

‘ಚಂಡಮಾರುತ ಹಾಗೂ ಭಾರಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಟೂರ್ನಿಯನ್ನು ಮುಂದೂಡಲಾಗಿದೆ’ ಎಂದು ಕೆನರಾ ಸರ್ಫಿಂಗ್ ಆಂಡ್ ವಾಟರ್‌ ಪ್ರಮೋಷನ್‌ ಕೌನ್ಸಿಲ್‌ನ ಯತೀಶ್‌ ಬೈಕಂಪಾಡಿ ತಿಳಿಸಿದ್ದಾರೆ.

‘ಬಹಳಷ್ಟು ಸರ್ಫಿಂಗ್‌ ಪಟುಗಳು ಈ ಟೂರ್ನಿಯಲ್ಲಿ ಭಾಗವಹಿಸುವ ಉತ್ಸಾಹ ತೋರಿದ್ದಾರೆ. ಮುಂದಿನ ಮುಂಗಾರಿನಲ್ಲಿ ಮತ್ತೊಮ್ಮೆ ಟೂರ್ನಿ ಆಯೋಜಿಸಲಾಗುವುದು’ ಎಂದು ಮಂತ್ರ ಸರ್ಫ್‌ ಕ್ಲಬ್‌ ಸದಸ್ಯ ರಾಮಮೋಹನ್‌ ಪರಾಂಜಪೆ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.