ADVERTISEMENT

ಸೈಕ್ಲಿಂಗ್: ಶ್ರೀಧರ್ ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2011, 19:30 IST
Last Updated 28 ಆಗಸ್ಟ್ 2011, 19:30 IST
ಸೈಕ್ಲಿಂಗ್: ಶ್ರೀಧರ್ ಗೆ ಪ್ರಶಸ್ತಿ
ಸೈಕ್ಲಿಂಗ್: ಶ್ರೀಧರ್ ಗೆ ಪ್ರಶಸ್ತಿ   

ಬೀಳಗಿ: ಸ್ಥಳೀಯ ಶ್ರೆ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ನಡೆದ ಅಂತರರಾಜ್ಯ ಪಾಯಿಂಟ್ ರೇಸ್ (60 ಕಿ.ಮೀ.) ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬಾಗಲಕೋಟೆ ಜಿಲ್ಲೆ ಹುನ್ನೂರಿನ ಶ್ರೆಧರ ಸವಣೂರ ಪ್ರಥಮ ಸ್ಥಾನ ಪಡೆದುಕೊಂಡರು.

ಮೊದಲ ಪ್ರಶಸ್ತಿ ಜೊತೆ ರೂ.20 ಸಾವಿರ ನಗದನ್ನೂ ಅವರು ಜೇಬಿಗಿಳಿಸಿದರು. ಬಸವರಾಜ ಕಡಪಟ್ಟಿ ದ್ವಿತೀಯ ಹಾಗೂ ನೈರುತ್ಯ ರೇಲ್ವೆಯ ಲಕ್ಕಪ್ಪ ಕುರಣಿ ತೃತೀಯ ಸ್ಥಾನ ಪಡೆದುಕೊಂಡರು. ವಿವಿಧ ರಾಜ್ಯಗಳು ಹಾಗೂ ರೇಲ್ವೆ ಇಲಾಖೆಯಿಂದ ಸುಮಾರು 80 ಜನ ಸೈಕ್ಲಿಂಗ್ ಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.