ADVERTISEMENT

ಸ್ಫೂರ್ತಿ, ಶ್ರೇಯಲ್ ಚಾಂಪಿಯನ್

ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಬೆಂಗಳೂರು: ಸ್ಫೂರ್ತಿ ಎಂ.ವಿ. ಮತ್ತು ಶ್ರೇಯಲ್ ಟಿ ಅವರು ಸಿವಿಎಲ್ ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಜೂನಿಯರ್ ಬಾಲಕಿಯರ ಮತ್ತು ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಎತ್ತಿ ಹಿಡಿದರು.

ಇಂಡಿಯನ್ ಜಿಮ್ಖಾನಾದಲ್ಲಿ ಶನಿವಾರ ನಡೆದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಸ್ಪೂರ್ತಿ 11-7, 12-10, 11-5, 11-8ರಲ್ಲಿ ರಕ್ಷಾ ಆರ್. ಅವರನ್ನು ಮಣಿಸಿ ಚಾಂಪಿಯನ್ ಆದರು.ಸೆಮಿಫೈನಲ್ ಪಂದ್ಯಗಳಲ್ಲಿ ರಕ್ಷಾ 11-5, 11-7, 8-11, 11-7, 11-5ರಲ್ಲಿ ಮೈತ್ರೇಯಿ ಬೇಲೂರ ಮೇಲೂ, ಸ್ಫೂರ್ತಿ 11-5, 11-7, 11-9, 11-7ರಲ್ಲಿ ಮಾಧುರ್ಯ ಎಂ. ವಿರುದ್ಧವೂ ಜಯ ಸಾಧಿಸಿ ಪ್ರಶಸ್ತಿ ಘಟ್ಟ ಪ್ರವೇಶಿಸಿದ್ದರು.

ಬಾಲಕರ ವಿಭಾಗದ ಫೈನಲ್‌ನಲ್ಲಿ ಶ್ರೇಯಾಲ್ 7-11, 12-10, 11-7, 11-9, 11-7ರಲ್ಲಿ ಸುನಂದ್ ವಾಸನ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು. ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಸುನಂದ್ 11-4, 11-8, 12-14, 11-6, 11-8ರಲ್ಲಿ ಶ್ರೇಯಸ್ ಕುಲಕರ್ಣಿ ಮೇಲೂ, ಶ್ರೇಯಲ್ 11-8, 11-9, 11-1, 13-11ರಲ್ಲಿ ವಿ.ಪಿ. ಚರಣ್ ವಿರುದ್ಧವೂ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.