ADVERTISEMENT

ದಕ್ಷಿಣ ವಲಯ ಹಾಕಿ: ಕರ್ನಾಟಕ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2018, 18:53 IST
Last Updated 12 ಜನವರಿ 2018, 18:53 IST

ಬೆಂಗಳೂರು: ನಿತಿನ್ ತಿಮ್ಮಯ್ಯ ಅವರ ಎರಡು ಗೋಲುಗಳ ನೆರವಿನಿಂದ ಎ.ಜಿ ಕರ್ನಾಟಕ ತಂಡ ಇಲ್ಲಿ ನಡೆದ ದಕ್ಷಿಣ ವಲಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಚಾಂಪಿಯನ್ ಆಗಿದೆ.

ಫೈನಲ್‌ನಲ್ಲಿ ಎ.ಜಿ ಕರ್ನಾಟಕ ತಂಡ 3–2 ಗೋಲುಗಳಲ್ಲಿ ಎ.ಜಿ ಆಂಧ್ರಪ್ರದೇಶ, ಹೈದರಾಬಾದ್ ತಂಡವನ್ನು ಮಣಿಸಿದೆ.

ಕರ್ನಾಟಕ ತಂಡದ ಪರ ನಿತಿನ್ ತಿಮ್ಮಯ್ಯ (10, 57ನೇ ನಿ.) ಎರಡು ಗೋಲು ತಂದಿತ್ತರು. ಅಪ್ಪಚು (26ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಆಂಧ್ರಪ್ರದೇಶ ತಂಡದ ಇರ್ಫಾನ್‌ (20, 31ನೇ ನಿ.) ಎರಡು ಗೋಲು ದಾಖಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.