ADVERTISEMENT

ಹಾಕಿ: ನಿತಿನ್‌ ತಿಮ್ಮಯ್ಯ ಮಿಂಚು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST

ಬೆಂಗಳೂರು: ನಿತಿನ್‌ ತಿಮ್ಮಯ್ಯ ಅವರ ಅಮೋಘ ಆಟದ ಬಲದಿಂದ ಬೆಂಗಳೂರಿನ ಕೊಡವ ಸಮಾಜ ತಂಡ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಸ್ಮಾರಕ 21ನೇ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.

ಶಾಂತಿನಗರದ ಸಮೀಪವಿರುವ ಕಾರ್ಯಪ್ಪ ಹಾಕಿ ಅರೆನಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕೊಡವ ಸಮಾಜ ತಂಡ 5–1 ಗೋಲುಗಳಿಂದ ಎಎಸ್‌ಸಿ ಬಾಯ್ಸ್‌ ತಂಡವನ್ನು ಸೋಲಿಸಿತು.

ವಿಜಯಿ ತಂಡದ ನಿತಿನ್‌ ತಿಮ್ಮಯ್ಯ 16, 28 ಮತ್ತು 45ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ಪಿ.ಎಸ್‌.ಚೆಂಗಪ್ಪ (39) ಮತ್ತು ವಿ.ಎಸ್‌.ವಿನಯ (70ನೇ ನಿ.) ತಲಾ ಒಂದು ಗೋಲು ಗಳಿಸಿ ಜಯದ ಅಂತರ ಹೆಚ್ಚಿಸಿದರು.

ADVERTISEMENT

ಎಎಸ್‌ಸಿ ತಂಡದ ಸಿರಿಲ್‌ ಲುಗನ್‌ 61ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು.

ಎಂಇಜಿಗೆ ಜಯ: ದಿನದ ಇನ್ನೊಂದು ಪಂದ್ಯದಲ್ಲಿ ಎಂಇಜಿ ತಂಡ ಜಯದ ತೋರಣ ಕಟ್ಟಿತು.

ಎಂಇಜಿ 1–0 ಗೋಲಿನಿಂದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ತಂಡವನ್ನು ಮಣಿಸಿತು.

ಸುರಾಸ್‌ ಸಿಂಗ್‌ 39ನೇ ನಿಮಿಷದಲ್ಲಿ ಗೆಲುವಿನ ಗೋಲು ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.