ಬೆಂಗಳೂರು: ವಿ.ಆರ್ ರಘುನಾಥ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬೆಂಗಳೂರಿನ ಕೊಡವ ಸಮಾಜ ತಂಡ ಇಲ್ಲಿ ನಡೆಯುತ್ತಿರುವ ಫೀಲ್ಡ್ ಮಾರ್ಷಲ್ ಕೆ.ಎಮ್.ಕಾರ್ಯಪ್ಪ ಸ್ಮಾರಕ ಹಾಕಿ ಪಂದ್ಯದಲ್ಲಿ ಗುರುವಾರ ಜಯದಾಖಲಿಸಿದೆ.
ಕೊಡವ ಸಮಾಜ, ಬೆಂಗಳೂರು ತಂಡ 4–1 ಗೋಲುಗಳಿಂದ ಎಮ್ಇಜಿಗೆ ಸೋಲುಣಿಸಿತು. ವಿಜಯೀ ತಂಡದ ರಘುನಾಥ್ (6, 41, 42ನೇ ನಿ.) ಮೂರು ಗೋಲು ದಾಖಲಿಸುವ ಮೂಲಕ ಹ್ಯಾಟ್ರಿಕ್ ಸಾಧನೆಗೆ ಕಾರಣರಾದರು. ಕೆ.ಕೆ.ಭರತ್ (43ನೇ ನಿ.) ಇನ್ನೊಂದು ಗೋಲು ತಂದುಕೊಟ್ಟರು.
ಕೆನರಾ ಬ್ಯಾಂಕ್ ತಂಡ 3–1 ಗೋಲುಗಳಲ್ಲಿ ಎಎಸ್ಸಿ ತಂಡವನ್ನು ಮಣಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.