ಹುಬ್ಬಳ್ಳಿ: ರಾಷ್ಟ್ರೀಯ ಸಬ್ ಜೂನಿಯರ್ ಅಟ್ಯಪಟ್ಯಾ ಚಾಂಪಿಯನ್ಷಿಪ್ಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲು ರಾಜ್ಯ ಅಟ್ಯಪಟ್ಯಾ ಸಂಸ್ಥೆ ಸೆ. 2ರಂದು ಬೆಳಿಗ್ಗೆ 8ಕ್ಕೆ ಧಾರವಾಡದ ಯುನಿವರ್ಸಿಟಿ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಟ್ರಯಲ್ಸ್ ಹಮ್ಮಿಕೊಂಡಿದೆ.
14 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರಿಗೆ ಅ. 27ರಿಂದ ಹಿಮಾಚಲ ಪ್ರದೇಶದಲ್ಲಿ ರಾಷ್ಟ್ರೀಯ ಚಾಂಪಿಯನ್ಷಿಪ್ ಜರುಗಲಿದೆ. ರಾಜ್ಯ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿರುವ ಶಾಲೆಗಳು, ಸಂಘ ಸಂಸ್ಥೆಗಳು ಟ್ರಯಲ್ಸ್ನಲ್ಲಿ ಭಾಗವಹಿಸಬಹುದು. ತರಬೇತುದಾರರಾದ ಡಾ. ವಿ.ಡಿ. ಪಾಟೀಲ ಮತ್ತು ಡಾ. ವಿ.ಡಿ. ಬೋಳಶೆಟ್ಟಿ ಅವರಲ್ಲಿ ಹೆಸರು ನೋಂದಾಯಿಸಬೇಕು.
ಇನ್ನಷ್ಟು ಮಾಹಿತಿಗೆ ಸಂಘದ ಉಪಾಧ್ಯಕ್ಷ ಆರ್.ವಿ. ದೇಸಾಯಿ ದೂರವಾಣಿ 9448967235 ಸಂಪರ್ಕಿಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.