ಕ್ರಿಕೆಟ್
(ಸಾಂಕೇತಿಕ ಚಿತ್ರ)
ಬೆಂಗಳೂರು: ವಿಕೆಟ್ ಕೀಪರ್– ಬ್ಯಾಟರ್ ಅನ್ವಯ್ ದ್ರಾವಿಡ್ ಅವರನ್ನು ಡೆಹ್ರಾಡೂನ್ನಲ್ಲಿ ಇದೇ 9 ರಿಂದ 17ರವರೆಗೆ ನಡೆಯಲಿರುವ ವಿನೂ ಮಂಕಡ್ ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡಕ್ಕೆ ನಾಯಕರನ್ನಾಗಿ ನೇಮಕ ಮಾಡಲಾಗಿದೆ.
15 ಆಟಗಾರರ ತಂಡ ಹೀಗಿದೆ:
ಅನ್ವಯ್ ದ್ರಾವಿಡ್ (ನಾಯಕ ಮತ್ತು ವಿಕೆಟ್ ಕೀಪರ್), ನಿತೀಶ್ ಆರ್ಯ, ಆದೇಶ್ ಡಿ. ಅರಸ್, ಮಣಿಕಾಂತ್ ಶಿವಾನಂದ (ಉಪ ನಾಯಕ), ಪ್ರಣೀತ್ ಶೆಟ್ಟಿ, ವಾಸವ್ ವೆಂಕಟೇಶ್, ಅಕ್ಷತ್ ಪ್ರಭಾಕರ್, ವೈಭವ್ ಸಿ., ಕುಲದೀಪ್ ಸಿಂಗ್ ಪುರೋಹಿತ್, ರತನ್ ಬಿ.ಆರ್., ವೈಭವ್ ಶರ್ಮಾ, ತೇಜಸ್ ಕೆ.ಎ., ಅಥರ್ವ ಮಾಳವೀಯ, ಸನ್ನಿ ಕಾಂಚಿ, ರೆಹಾನ್ ಮೊಹಮ್ಮದ್. ಕೋಚ್: ಕೆ.ಬಿ.ಪವನ್, ಬೌಲಿಂಗ್ ಕೋಚ್: ಎಸ್.ಎಲ್.ಅಕ್ಷಯ್, ಮ್ಯಾನೇಜರ್ ಎಸ್.ಎ.ಸತೀಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.