ADVERTISEMENT

ಸಂಜಯ್‌ ಬಂಗಾರ್‌ ವಿಚಾರಣೆ ಸಾಧ್ಯತೆ

ಪಿಟಿಐ
Published 5 ಸೆಪ್ಟೆಂಬರ್ 2019, 12:23 IST
Last Updated 5 ಸೆಪ್ಟೆಂಬರ್ 2019, 12:23 IST

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಬ್ಯಾಟಿಂಗ್‌ ಕೋಚ್‌ ಸ್ಥಾನದಿಂದ ವಜಾಗೊಂಡಿರುವ ಸಂಜಯ್‌ ಬಂಗಾರ್‌ ಬಿಸಿಸಿಐನಿಂದ ವಿಚಾರಣೆಗೆ ಒಳಗಾಗುವ ಸಾಧ್ಯತೆಯಿದೆ. ರಾಷ್ಟ್ರೀಯ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಸದಸ್ಯ ದೇವಾಂಗ್‌ ಗಾಂಧಿ ಜೊತೆ ಅವರು ವಾಗ್ವಾದ ನಡೆಸಿದ ವರದಿಯಾಗಿತ್ತು. ತಂಡದ ಆಡಳಿತ ವ್ಯವಸ್ಥಾಪಕ ಸ್ಥಾನದಿಂದ ನಿರ್ಗಮಿಸುತ್ತಿರುವ ಸುನಿಲ್‌ ಸುಬ್ರಮಣಿಯನ್‌ ಅಥವಾ ಮುಖ್ಯ ಕೋಚ್‌ ರವಿ ಶಾಸ್ತ್ರಿ ಅವರು, ವಾಗ್ವಾದಕ್ಕೆ ಸಂಬಂಧಿಸಿ ಅಧಿಕೃತ ವರದಿಯನ್ನು ನೀಡಿದರೆ ಬಿಸಿಸಿಐ ವಿಚಾರಣೆ ನಡೆಸಲಿದೆ.

ಸಂಜಯ್‌ ಬಂಗಾರ್‌ ಅವರ ಬದಲಾಗಿ ವಿಕ್ರಂ ರಾಥೋಡ್‌ ಅವರನ್ನು ಬ್ಯಾಟಿಂಗ್‌ ಕೋಚ್‌ ಆಗಿ ನೇಮಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT