ADVERTISEMENT

ಮನೆಯಲ್ಲಿ ಸುರಕ್ಷಿತವಾಗಿರಿ: ಪೂಜಾರ

ಪಿಟಿಐ
Published 4 ಏಪ್ರಿಲ್ 2020, 19:30 IST
Last Updated 4 ಏಪ್ರಿಲ್ 2020, 19:30 IST
ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ   

ನವದೆಹಲಿ: ಮನೆಯೊಳಗೆ ಇದ್ದು ಮಾತ್ರ ಕೊವಿಡ್ –19 ಮಹಾಮಾರಿಯನ್ನು ಸೋಲಿಸಲು ಸಾಧ್ಯ ಎಂದು ಟೆಸ್ಟ್ ಪರಿಣತ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಹೇಳಿದ್ದಾರೆ.

ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ರೀಡಾಪಟುಗಳೊಂದಿಗೆ ನಡೆಸಿದ ವಿಡಿಯೊ ಸಂವಾದದಲ್ಲಿ ಪೂಜಾರ ಕೂಡ ಭಾಗಿಯಾಗಿದ್ದರು. ಈ ಕುರಿತು ಅವರು ಮಾತನಾಡಿದ್ದಾರೆ.

‘ಹೋರಾಟದಲ್ಲಿ ಜನರು ಮತ್ತು ಕ್ರೀಡಾಪಟುಗಳಲ್ಲಿ ಆತ್ಮವಿಶ್ವಾಸ ತುಂಬುವ ಸ್ಫೂರ್ತಿದಾಯಕ ಕಾರ್ಯವನ್ನು ಮಾಡಬೇಕೆಂದು ಮೋದಿಯವರು ಹೇಳಿದ್ದಾರೆ’ ಎಂದಿದ್ದಾರೆ.

ADVERTISEMENT

‘ಜನರು ಈ ಪರಿಸ್ಥಿತಿಯಲ್ಲಿ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವೈರಸ್‌ ಸೋಂಕಿನ ಕುರಿತು ಯಾವುದೇ ರೀತಿಯ ಉಡಾಫೆ ಸಲ್ಲದು. ಪ್ರತಿಯೊಬ್ಬರೂ ಯೋಧನಂತೆ ಹೋರಾಡುವ ಸ್ಥಿತಿ ಇದು. ದೇಶಕ್ಕಾಗಿ ಸೇವೆ ಸಲ್ಲಿಸುವ ಅಪೂರ್ವ ಅವಕಾಶ ಇದು. ಅದಕ್ಕಾಗಿ ತಮ್ಮ ಕುಟುಂಬದೊಂದಿಗೆ ಮನೆಯೊಳಗೆ ನೆಮ್ಮದಿಯಾಗಿರಿ’ ಎಂದು ಪೂಜಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.