ADVERTISEMENT

ಆಯ್ಕೆ ಸಮತಿ ಸಭೆ: ಸಮರ್ಥಿಸಿಕೊಳ್ಳಲು ಚೇತನ್ ಶರ್ಮಾಗೆ ಸಿಗುವುದೇ ಅನುಮತಿ?

ಪಿಟಿಐ
Published 16 ಫೆಬ್ರುವರಿ 2023, 7:48 IST
Last Updated 16 ಫೆಬ್ರುವರಿ 2023, 7:48 IST
   

ನವದೆಹಲಿ: ಭಾರತ ತಂಡದ ಆಯ್ಕೆ ಪ್ರಕ್ರಿಯೆಯ ರಹಸ್ಯ ಮಾಹಿತಿಗಳನ್ನು ಟಿವಿ ವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿದ ಆರೋಪಕ್ಕೆ ಸಿಲುಕಿರುವ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಅವರಿಗೆ ತಮ್ಮನ್ನು ಸಮರ್ಥಿಸಲು ಬಿಸಿಸಿಐ ಅವಕಾಶ ನೀಡುವ ಸಾಧ್ಯತೆಯಿದೆ.

ಆದರೆ ಆಸ್ಟ್ರೇಲಿಯಾ ಎದುರಿನ ಮೂರು ಹಾಗೂ ನಾಲ್ಕನೇ ಟೆಸ್ಟ್‌ಗೆ ತಂಡ ಪ್ರಕಟಿಸುವ ಮುನ್ನ ನಡೆಯಲಿರುವ ಆಯ್ಕೆ ಸಮಿತಿ ಸಭೆಗೆ ಹಾಜರಾಗಲು ಚೇತನ್‌ ಅವರಿಗೆ ಅನುಮತಿ ಸಿಗುವುದೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

‘ಈ ಕುಟುಕು ಕಾರ್ಯಾಚರಣೆಯ ಬಳಿಕ, ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ ಎಂದು ಯಾವುದೇ ಆಟಗಾರ ಅಥವಾ ಆಯ್ಕೆಗಾರರು ಪತ್ರಕರ್ತರೊಂದಿಗೆ ವಿಷಯಗಳನ್ನು ಹಂಚಿಕೊಳ್ಳಲು ಹಿಂಜರಿಯಬಹುದು‘ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.