ADVERTISEMENT

ಎಂದೂ ಮರೆಯದ ಜಯ | ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮುಖಭಂಗ, ಭಾರತಕ್ಕೆ ಟ್ರೋಫಿ

ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮುಖಭಂಗ

ಪಿಟಿಐ
Published 20 ಜನವರಿ 2021, 0:50 IST
Last Updated 20 ಜನವರಿ 2021, 0:50 IST
ಭಾರತ ತಂಡವು ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಗೆದ್ದ ಬಾರ್ಡರ್‌–ಗಾವಸ್ಕರ್ ಟ್ರೋಫಿಯೊಂದಿಗೆ ರಿಷಭ್ ಪಂತ್. ಚಿತ್ರದಲ್ಲಿ ಶುಭಮನ್ ಗಿಲ್, ನವದೀಪ್ ಸೈನಿ ಮತ್ತು ಮಯಂಕ್ ಅಗರವಾಲ್ ಇದ್ದಾರೆ –ಎಪಿ/ಪಿಟಿಐ ಚಿತ್ರ
ಭಾರತ ತಂಡವು ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಗೆದ್ದ ಬಾರ್ಡರ್‌–ಗಾವಸ್ಕರ್ ಟ್ರೋಫಿಯೊಂದಿಗೆ ರಿಷಭ್ ಪಂತ್. ಚಿತ್ರದಲ್ಲಿ ಶುಭಮನ್ ಗಿಲ್, ನವದೀಪ್ ಸೈನಿ ಮತ್ತು ಮಯಂಕ್ ಅಗರವಾಲ್ ಇದ್ದಾರೆ –ಎಪಿ/ಪಿಟಿಐ ಚಿತ್ರ   

ಬ್ರಿಸ್ಬೇನ್ : ಅಜಿಂಕ್ಯ ರಹಾನೆ ನಾಯಕತ್ವದ ಯುವಪಡೆಯು ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಟೆಸ್ಟ್‌ ಸರಣಿಯಲ್ಲಿ ಸೋಲಿಸಿ, ಬಾರ್ಡರ್‌–ಗಾವಸ್ಕರ್ ಟ್ರೋಫಿ ಜಯಿಸಿತು.

ಗಾಬಾ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯವಾದ ಸರಣಿಯ ಕೊನೆಯ ಟೆಸ್ಟ್‌ನಲ್ಲಿ328 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡವು 3 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು. ನಾಲ್ಕು ಪಂದ್ಯಗಳ ಸರಣಿಯನ್ನು 2–1ರಿಂದ ಗೆದ್ದಿತು.

ಸತತ ಎರಡನೇ ಸಲ ಆಸ್ಟ್ರೇಲಿಯಾವನ್ನು ಅದರ ನೆಲದಲ್ಲಿಯೇ ಮಣಿಸಿತು. 2018–19ರಲ್ಲಿ ಭಾರತ ಇಲ್ಲಿ ಪ್ರಥಮ ಬಾರಿ ಸರಣಿ ಗೆದ್ದು ದಾಖಲೆ ಮಾಡಿತ್ತು. ಆತಿಥೇಯ ತಂಡವು ಕಳೆದ 32 ವರ್ಷಗಳಿಂದ ಗಾಬಾ ಕ್ರೀಡಾಂಗಣದಲ್ಲಿ ಒಂದೂ ಪಂದ್ಯ ಸೋತಿರಲಿಲ್ಲ. ಈಗ ಭಾರತದ ಎದುರು ಮುಖಭಂಗ ಅನುಭವಿಸಿತು. ಇಲ್ಲಿ ಭಾರತವು ಗೆದ್ದ ಮೊದಲ ಪಂದ್ಯ ಇದಾಗಿದೆ.

ADVERTISEMENT

ಪಂದ್ಯದ ಐದನೇ ದಿನ ಬೆಳಿಗ್ಗೆ ಅನುಭವಿ ರೋಹಿತ್ ಶರ್ಮಾ (7) ಔಟಾದಾಗ ಯುವಬ್ಯಾಟ್ಸ್‌ಮನ್ ಶುಭಮನ್ ಗಿಲ್ (91; 146ಎಸೆತ) ದಿಟ್ಟತನದಿಂದ ಆಡಿದರು. ತಮ್ಮ ವೃತ್ತಿಜೀವನದ ಮೂರನೇ ಟೆಸ್ಟ್‌ನಲ್ಲಿ ಆಡಿದ ಗಿಲ್, ಕೇವಲ ಒಂಬತ್ತು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು. ಆದರೆ ಜಯದ ಕನಸಿಗೆ ಗಟ್ಟಿ ಅಡಿಪಾಯ ಹಾಕಿದರು. ಅದರ ಮೇಲೆ ಚೇತೆಶ್ವರ್ ಪೂಜಾರ (56; 211ಎಸೆತ) ’ಗೋಡೆ‘ ಕಟ್ಟಿದರೆ, ರಿಷಭ್ ಪಂತ್ (ಅಜೇಯ 89)ಗೆಲುವಿನ ಗೋಪುರ ನಿರ್ಮಿಸಿದರು. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ನವಪ್ರತಿಭೆಗಳು ಮಿಂಚಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.