ನವದೆಹಲಿ: ಭಾರತ ತಂಡಕ್ಕೆ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ ಸಮಸ್ಯೆ ಬಗೆಹರಿಯಿತು. ರಿಷಭ್ ಪಂತ್ ಪರಿಹಾರವಾಗಿ ಲಭಿಸಿದ್ದಾರೆ ಎಂದು ಹಿರಿಯ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರಿಷಭ್ ಅವರು ನಾಲ್ಕನೇ ಕ್ರಮಾಂಕದಲ್ಲಿ ಬಂದು 41 ಎಸೆತಗಳಲ್ಲಿ 48 ರನ್ಗಳನ್ನು ಗಳಿಸಿದರು. ಅವರ ಆಟವನ್ನು ಯುವಿ ಶ್ಲಾಘಿಸಿದ್ದಾರೆ.
‘ಅಂತಿಮವಾಗಿ ನಾವು ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ನನ್ನು ಪಡೆದಿದ್ದೇವೆ. ಭವಿಷ್ಯದ ಸಮಸ್ಯೆಯೂ ನೀಗಿದೆ. ರಿಷಭ್ ಪಂತ್’ ಎಂದು ಯುವಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.