ADVERTISEMENT

ಬಾಂಗ್ಲಾ ಪಂದ್ಯಕ್ಕೆ ಕಾರ್ತಿಕ್‌ ಅನುಮಾನ

ಪಿಟಿಐ
Published 31 ಅಕ್ಟೋಬರ್ 2022, 18:17 IST
Last Updated 31 ಅಕ್ಟೋಬರ್ 2022, 18:17 IST
ದಿನೇಶ್‌ ಕಾರ್ತಿಕ್‌
ದಿನೇಶ್‌ ಕಾರ್ತಿಕ್‌   

ಅಡಿಲೇಡ್‌ : ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಬೆನ್ನು ನೋವಿಗೆ ಒಳಗಾಗಿರುವ ಭಾರತ ತಂಡದ ವಿಕೆಟ್‌ ಕೀಪರ್‌ ಬ್ಯಾಟರ್‌ ದಿನೇಶ್‌ ಕಾರ್ತಿಕ್‌ ಅವರು ಬುಧವಾರ ಬಾಂಗ್ಲಾದೇಶದ ವಿರುದ್ಧ ಕಣಕ್ಕಿಳಿಯುವುದು ಅನುಮಾನ.

‘ಕಾರ್ತಿಕ್‌ ಅವರ ಗಾಯದ ಗಂಭೀರತೆ ಎಷ್ಟು ಎಂಬುದು ಇನ್ನೂ ತಿಳಿದಿಲ್ಲ. ಫಿಟ್‌ನೆಸ್‌ ಮರಳಿ ಪಡೆಯಲು ವೈದ್ಯಕೀಯ ತಂಡ ಅವರಿಗೆ ನೆರವಾಗುತ್ತಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ತಿಕ್‌ ಅಲಭ್ಯರಾದರೆ, ರಿಷಭ್‌ ಪಂತ್‌ಗೆ ವಿಶ್ವಕಪ್‌ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಲಭಿಸಲಿದೆ.

ADVERTISEMENT

ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದ ಕೊನೆಯ ಐದು ಓವರ್‌ ಪಂತ್ ಅವರು ವಿಕೆಟ್‌ ಕೀಪಿಂಗ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.