ADVERTISEMENT

ಕೆಪಿಎಲ್‌ ಟ್ರೋಫಿ ಅನಾವರಣ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 20:15 IST
Last Updated 13 ಆಗಸ್ಟ್ 2019, 20:15 IST
ಹಿರಿಯ ಕ್ರಿಕೆಟಿಗ ಬಿ.ಎಸ್‌. ಚಂದ್ರಶೇಖರ್‌, ಭಾರತ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮತ್ತು ನಟ ಸುದೀಪ್‌ ಟ್ರೋಫಿ ಅನಾವರಣ ಮಾಡಿದರು
ಹಿರಿಯ ಕ್ರಿಕೆಟಿಗ ಬಿ.ಎಸ್‌. ಚಂದ್ರಶೇಖರ್‌, ಭಾರತ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮತ್ತು ನಟ ಸುದೀಪ್‌ ಟ್ರೋಫಿ ಅನಾವರಣ ಮಾಡಿದರು   

ಬೆಂಗಳೂರು: ಎಲ್ಲರ ಕಂಗಳ ಮುಂದೆಯೇ ಮೂರು ಪ್ಲೈವುಡ್ ಫಲಕಗಳನ್ನು ಜೋಡಿಸಿ ಮಾಡಿದ್ದ ಪೆಟ್ಟಿಗೆ ಖಾಲಿ ಇದೇ ಎಂದುಕೊಂಡವರಿಗೆ ಅಚ್ಚರಿ ಕಾದಿತ್ತು. ಅದನ್ನು ತೆರೆದಾಗ ಮಿರಿಮಿರಿ ಮಿಂಚುವ ಟ್ರೋಫಿಯೊಂದಿಗೆ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಪ್ರತ್ಯಕ್ಷರಾಗಿದ್ದರು.

ಹೌದು ಮಂಗಳವಾರ ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಂಗಣ ದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಎಂಟನೇ ಆವೃತ್ತಿಯ ಕಪ್ ಅನಾವರಣಗೊಂಡಿದ್ದು ಹೀಗೆ. ಅದೂ ಜಾದೂಗಾರ ಆಕರ್ಷ್ ಭಟ್ ಅವರ ಕಣ್ಕಟ್ಟಿನ ಕೈಚಳಕವಾಗಿತ್ತು.

ಅದಕ್ಕೆ ಹಿರಿಯ ಕ್ರಿಕೆಟಿಗ ಬಿ.ಎಸ್. ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಸಿನಿತಾರೆ ಕಿಚ್ಚ ಸುದೀಪ್ ಅವರು ಸಾಕ್ಷಿಯಾದರು. ಕೆಎಸ್‌ಸಿಎ ಹಂಗಾಮಿ ಅಧ್ಯಕ್ಷ ಸಂಜಯ್ ದೇಸಾಯಿ, ಕಾರ್ಯದರ್ಶಿ ಸುಧಾಕರ್ ರಾವ್, ಜಂಟಿ ಕಾರ್ಯದರ್ಶಿ ಸಂತೋಷ್ ಮೆನನ್, ವಕ್ತಾರ ವಿನಯ್ ಮೃತ್ಯುಂಜಯ್ ಕೂಡ ಅಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.