ಹುಬ್ಬಳ್ಳಿ: ಅನೀಶ್ ಭೂಸದ (6.3–0–17–5) ಬೌಲಿಂಗ್ ಬಲದಿಂದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ ತಂಡ, ಕೆಎಸ್ಸಿಎ ಧಾರವಾಡ ವಲಯದ ಮೊದಲ ಡಿವಿಷನ್ ಕ್ರಿಕೆಟ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ನಾಲ್ಕು ವಿಕೆಟ್ಗಳ ಗೆಲುವು ಸಾಧಿಸಿತು.
ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಧಾರವಾಡದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ (ಸಿಸಿಕೆ) ‘ಎ’ ತಂಡ 43.3 ಓವರ್ಗಳಲ್ಲಿ 156 ರನ್ ಗಳಿಸಿತು. ಮಂದಬೆಳಕು ಹಾಗೂ ಮಳೆ ಅಡ್ಡಿಯಾದ್ದರಿಂದ 148 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು. ಈ ಗುರಿಯನ್ನು ಬಿಡಿಕೆ 32.1 ಓವರ್ಗಳಲ್ಲಿ ತಲುಪಿತು. ಶಿಶಿರ್ ಭವಾನೆ (ಅಜೇಯ 60) ಬ್ಯಾಟಿಂಗ್ ಮೂಲಕ ಮಿಂಚಿದರು.
ಇನ್ನೊಂದು ಪಂದ್ಯದಲ್ಲಿ ಧಾರವಾಡದ ಎಸ್ಡಿಎಂ ಕ್ರಿಕೆಟ್ ಅಕಾಡೆಮಿ ‘ಎ’ ತಂಡ ಮೂರು ವಿಕೆಟ್ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ‘ಎ’ ತಂಡ 41.5 ಓವರ್ಗಳಲ್ಲಿ 205 ರನ್ ಗಳಿಸಿತ್ತು. ಶರತ್ ಶ್ರೀನಿವಾಸ್ (ಔಟಾಗದೆ 85) ಉತ್ತಮ ಬ್ಯಾಟಿಂಗ್ ಇದಕ್ಕೆ ಕಾರಣವಾಯಿತು.
206 ರನ್ಗಳ ಗುರಿಯನ್ನು ಎಸ್ಡಿಎಂ 39.1 ಓವರ್ಗಳಲ್ಲಿ ತಲುಪಿತು. ಆರಂಭಿಕ ಬ್ಯಾಟ್ಸ್ಮನ್ ರೋಷನ್ ಜವಳಿ (65) ಮತ್ತು ಅಜಯ ಜವಳಿ (ಅಜೇಯ 75) ಉತ್ತಮ ಬ್ಯಾಟಿಂಗ್ ತಂಡದ ಗೆಲುವು ಸುಲಭ ಮಾಡಿತು
ಬೆಳಗಾವಿಯಲ್ಲಿ ನಡೆದ ಪಂದ್ಯದಲ್ಲಿ ಎಸ್ಡಿಎಂ ‘ಬಿ’ ತಂಡದ ಎದುರು ಬೆಳಗಾವಿ ಸ್ಪೋರ್ಟ್ ಕ್ಲಬ್ ‘ಎ’ ತಂಡ 93 ರನ್ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ್ದ ಈ ತಂಡ 49.1 ಓವರ್ಗಳಲ್ಲಿ 236 ರನ್ ಗಳಿಸಿತ್ತು. ಎಸ್ಡಿಎಂ ‘ಬಿ’ 143 ರನ್ಗೆ ಆಲೌಟ್ ಆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.