ADVERTISEMENT

ಬೀದಿ ಮಕ್ಕಳ ವಿಶ್ವಕಪ್‌: ಮಿಥಾಲಿ ರಾಯಭಾರಿ

ಪಿಟಿಐ
Published 16 ಏಪ್ರಿಲ್ 2019, 19:16 IST
Last Updated 16 ಏಪ್ರಿಲ್ 2019, 19:16 IST
ಮಿಥಾಲಿ ರಾಜ್
ಮಿಥಾಲಿ ರಾಜ್   

ನವದೆಹಲಿ: ಬೀದಿಬದಿಯ ಮಕ್ಕಳಿಗಾಗಿ ಆಯೋಜಿಸಲಾಗುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ರಾಯಭಾರಿಯಾಗಿ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ನೇಮಕಗೊಂಡಿದ್ದಾರೆ.

ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತು ಐಪಿಎಲ್‌ ಫ್ರಾಂಚೈಸ್‌ ರಾಜಸ್ಥಾನ್ ರಾಯಲ್ಸ್ ತಂಡವನ್ನು ಈ ಹಿಂದೆ ರಾಯಭಾರಿಯಾಗಿ ಆಯ್ಕೆ ಮಾಡಲಾಗಿತ್ತು.

‘ಭಾರತದಲ್ಲಿ ಅಂದಾಜು 20 ಲಕ್ಷ ಬೀದಿ ಮಕ್ಕಳು ಇದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಪ್ರತಿಭೆಯನ್ನು ಬೆಳಕಿಗೆ ತರಬೇಕಾಗಿದೆ. ಇಂಥ ಮಕ್ಕಳ ವಿಶ್ವಕಪ್‌ ಟೂರ್ನಿಗೆ ರಾಯಭಾರಿಯಾಗುವುದೆಂದರೆ ಖುಷಿಯ ವಿಷಯ. ಅವರಿಗೆ ಸಾರ್ವಜನಿಕರೂ ಬೆಂಬಲ ನೀಡಬೇಕು’ ಎಂದು ಮಿಥಾಲಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.